ಬೆಂಗಳೂರು” ದುಬಾರಿ ದುನಿಯಾದ ನಡುವೆ ಜೀವನ ಮಾಡೋದೆ ಕಷ್ಟ ಆಗಿದೆ. ಜನಸಾಮಾನ್ಯರು ಅಂತೂ ಬದುಕೋಕೆ ಆಗ್ತಿಲ್ಲ.ಏಪ್ರಿಲ್ ಮೇ ತಿಂಗಳು ಬಂದ್ರೆ ಸಾಕು ಟಣ್ ಅಂತ ಕರೆಂಟ್ ಬಿಲ್ ಏರಿಕೆ ಆಗೇ ಬಿಡುತ್ತೆ. ಇದೀಗ ಇಷ್ಟು ಸಲದು ಅಂತ ಸಾರಿಗೆ ಇಲಾಖೆನೂ ವರ್ಷಕ್ಕೊಮ್ಮೆ ಬಸ್ ದರ ಪರಿಷ್ಕರಣೆ ಮಾಡಿ ಅಂತ ಸರ್ಕಾರದ ಕದ ತಟ್ಟಿದೆ.ಬೆಲೆ ಏರಿಕೆಯಿಂದ ಬೆಂದುಹೋಗ್ತಿರೋ ಜನರಿಗೆ ಇದು ಟೆನ್ಷನ್ ಹೆಚ್ಚಿಸಿದೆ.
ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕಾಡ್ತನೇ ಇದೆ. ಸಾಮಾನ್ಯ . ಮಧ್ಯಮ ವರ್ಗದ ಜನರಂತೂ ಈ ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಾ ಇಲ್ಲ. ಎಲ್ಲಾವೂ ತುಂಬಾನೇ ಕಾಸ್ಟ್ಲಿಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ವಿದ್ಯುತ್ ದರ, ಹಾಲಿನ ದರ ಏರಿಸ್ತಾ ಬಂದಿದ್ದಾರೆ.ಇದೀಗ ಸಾರಿಗೆ ನಿಗಮಗಳು ನಮಗೆ ನಷ್ಟ ಕೆಇಆರ್ಸಿ ಮಾದರಿ ನಮಗೂ ವರ್ಷಕ್ಕೊಮ್ಮೆ ಬಸ್ ಪ್ರಯಾಣ ದರ ಹೆಚ್ಚಿಸಿದ ಅಂತ ಪ್ರಸ್ತಾಪ ಇಟ್ಟಿವೆ.
ಹೌದು.. ರಾಜ್ಯದ ಜನರ ನಾಡಿ ಮಿಡಿತವಾಗಿರೋದು ನಮ್ಮ ರಾಜ್ಯ ಸರ್ಕಾರದ ಸಾರಿಗೆ ಸಂಸ್ಥೆ. ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ ಗಳ ಸೇವೆ ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಸಾರಿಗೆ ಸಂಸ್ಥೆ ನಷ್ಟದಲ್ಲಿರೋದು ಎಲ್ಲರಿಗೂ ಗೊತ್ತಿರೋ ಸತ್ಯವೇ ಆಗಿದೆ. ಈ ಕಾರಣಕ್ಕೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ಏಕ ಸದಸ್ಯ ಸಮತಿಯನ್ನ ರಚನೆ ಮಾಡಿ ಸಾರಿಗೆ ನಿಗಮಗಳ ನಷ್ಟವನ್ನ ನಿಭಾಯಿಸಲು ವರದಿ ನೀಡುವಂತೆ ತಿಳಿಸಲಾಗಿತ್ತು. ಈ ವರದಿಯನ್ನ ಸಲ್ಲಿಸಿರೋ ಸಮಿತಿ ಇಂಧನ ಇಲಾಖೆಯಲ್ಲಿ ಹೇಗೆ ವರ್ಷಕ್ಕೆ ಒಮ್ಮೆ ಪ್ರತಿ ಯುನಿಟ್ ದರ ಏರಿಕೆ ಮಾಡಲು ಕೆ ಇ ಆರ್ ಸಿ ಇದೆಯೋ ಹಾಗೇ ಸಾರಿಗೆ ಇಲಾಖೆಯಲ್ಲೂ ಟಿಕೆಟ್ ದರ ಪರಿಷ್ಕರಣೇ ಬಗ್ಗೆ ಮತ್ತು ಆರ್ಥಿಕ ನಿರ್ವಹಣೆ ಮಾಡಲು ಒಂದು ಬೋರ್ಡ್ ಸ್ಥಾಪಿಸುವಂತೆ ವರದಿಯಲ್ಲಿ ಸಲಹೆ ನೀಡಿದ್ದಾರೆ.
ಈ ವರದಿ ಸಲ್ಲಿಕೆ ಆದ ಮೇಲೆ ವಿದ್ಯುತ್ ರೀತಿ ವರ್ಷಕ್ಕೊಮ್ಮೆ ಬಸ್ ಟಿಕೆಟ್ ದರ ಏರಿಕೆ ವಿಚಾರ ಹೆಚ್ಚು ಚರ್ಚೆಯಾಗ್ತಿದೆ. ಅದೇ ಮಾದರಿಯನ್ನು ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೂ ಅಳವಡಿಸಲು ಸಾರಿಗೆ ನಿಗಮ ಉತ್ಸುಕತೆ ತೋರುತ್ತಿದೆ. ಪ್ರತಿ ವರ್ಷ ಸಾರಿಗೆ ಇಲಾಖೆಯು ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಆಯೋಗದ ಮುಂದೆ ಇರಿಸಿ ಆರ್ಥಿಕ ಪರಿಸ್ಥಿತಿ ತಕ್ಕಂತೆ ಪ್ರಯಾಣ ದರ ಹೆಚ್ಚಳ ಮಾಡಬೇಕಿದೆ. ಡೀಸಲ್, ಬಿಡಿ ಭಾಗಗಳು ಸೇರಿದಂತೆ ನೌಕರರ ವೇತನ ಹೆಚ್ಚಳ ಇನ್ನಿತರ ಕಾರಣಗಳಿಂದ ನಿಗಮದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹೋಗಿದೆ. ದರ ಪರಿಷ್ಕರಣೆಗ ಸಾರಿಗೆ ನಿಗಮಗಳಿಗೆ ಅನಿವಾರ್ಯ ವಾಗಿದೆ. 2016ರಿಂದ ಸಾರಿಗೆ ನಿಗಮ ಬಸ್ ಟಿಕೆಟ್ ರೇಟ್ ಹೆಚ್ಚು ಮಾಡಿಲ್ಲ. ನಾಲ್ಕು ನಿಗಮಗಳಿಂದ 4 ಸಾವಿರ ಕೋಟಿ ಸಾಲದಲ್ಲಿರುವ ಸಾರಿಗೆ ನಿಗಮಗಳು, ವಿದ್ಯುತ್ ದರದಂತೆ ಪ್ರಯಾಣ ದರ ಹೆಚ್ಚಳ ಮಾಡಿದ್ರೆ ಸಾರಿಗೆ ನಿಗಮ ಉಳಿಯಲು ಸಾಧ್ಯತೆಯಿದೆ.
ಹಾಗಾದ್ರೆ ವರ್ಷಕ್ಕೊಮ್ಮೆ ದರ ಪರಿಷ್ಕರಣೆಯಿಂದ ಅನಾನುಕೂಲಗಳೇನು?
-ಪ್ರತಿ ವರ್ಷ ಬಸ್ ದರ ಏರಿಕೆ ಸಾಧ್ಯತೆ
-ಪ್ರಯಾಣಿಕರಿಗೆ ಹೆಚ್ಚುವರಿ ಪ್ರಯಾಣ ದರ ಭರಿಸೋದು ಅನಿವಾರ್ಯ
-ಸಾರಿಗೆ ಬಸ್ ದರ ಹೆಚ್ಚಳದಿಂದ ಖಾಸಗಿ ಬಸ್ ದರ ಹೆಚ್ಚಳ ಆಗುತ್ತೆ
-ಪ್ರಯಾಣ ಮಾತ್ರವಲ್ಲ ಗೂಡ್ಸ್ ದರ ಹೆಚ್ಚಾಗಲಿದೆ.
-ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಲಿದೆ.
ದರ ಪರಿಷ್ಕರಣೆಯಿಂದ ನಿಗಮಗಳಿಗೆ ಅನುಕೂಲಗಳೇನು?
-ಸಾರಿಗೆ ನಾಲ್ಕು ನಿಗಮ ಆರ್ಥಿಕ ಸಂಕಷ್ಟದಿಂದ ಪಾರು.
-ಪ್ರತಿ ವರುಷ ಡೀಸೆಲ್, ಸಿಬ್ಬಂದಿ ವೇತನ ಪರಿಶೀಲಿಸಿ ಹೆಚ್ಚಳ
-ಡೀಸೆಲ್ ದರ ಕಡಿಮೆ ಆದ್ರೆ ದರ ಇಳಿಕೆಯ ಸಾಧ್ಯತೆಯೂ ಇರುತ್ತೆ
-ಸರ್ಕಾರದ ನಿರ್ಧಾರಕ್ಕೆ ಕಾಯದೆ ಬಸ್ ದರ ಏರಿಸಬಹುದು.
ಒಟ್ನಲ್ಲಿ ರಾಜ್ಯ ಸರ್ಕಾರದ ಮುಂದೆ ಎಸ್ಕಾಂಗಳಲ್ಲಿರುವಂತೆ ಸಾರಿಗೆ ನಿಗಮಗಳಲ್ಲಿ ತನ್ನ ಆರ್ಥಿಕ ಪರಿಸ್ಥಿತಿಯ ನಿರ್ವಹಣೆಗೆ ತನ್ನದ ಆದ ಸ್ವಾತಂತ್ರ್ಯ ಮಂಡಳಿ ಇದ್ರೇ ಒಳಿತು ಅನ್ನೋ ಚಿಂತನೆ ನಡೆದಿರೋದಂತು ಸುಳ್ಳಲ್ಲ. ಆದ್ರೆ ಸರ್ಕಾರ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಶ್ರೀನಿವಾಸ್ ಮೂರ್ತಿ ಕಮಿಟಿ ಶಿಪಾರಸ್ಸುಗಳಿಗೆ ಓಕೆ ಅನ್ನುತ್ತಾ ಅನ್ನೋದು ಕೂತುಹಲ ಕೆರಳಿಸಿದೆ.