ಬೆಂಗಳೂರು:- ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಬೀಳುತ್ತೆ, ಮಾನದಂಡಗಳನ್ನ ಹಾಕಲಾಗುತ್ತೆ ಎಂಬ ಗೊಂದಲಗಳಿಗೆ ಸ್ವತಃ ಸಿಎಂ ಸಿದ್ರಾಮಯ್ಯ ಫುಲ್ ಸ್ಟಾಪ್ ಹಾಕಿದ್ದಾರೆ. ಯಾವ್ದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲಿಸಲ್ಲ ಮುಂದುವರೆಯುತ್ವೆ ಅಂತ ಸ್ಪಷ್ಟಪಡಿಸಿದ್ದಾರೆ. ಅತ್ತ ಡಿಸಿಎಂ ಡಿಕೆಶಿ ಕೂಡ ಗ್ಯಾರಂಟಿ ಮುಂದುವರೆಯುತ್ವೆ ಅಂದಿದ್ದಾರೆ. ಪರಿಷ್ಕರಣೆ ಮಾಡ್ಬೇಕು ಅನ್ನೋ ಸಚಿವರ ಗೊಂದಲದ ಹೇಳಿಕೆಗಳಿಗೆ ಇದ್ರಿಂದ ಮುಕ್ತಿಸಿಕ್ಕಿದ್ದು, ಎಲ್ಲಿ ರಾಜ್ಯ ಸರ್ಕಾರ ಉಚಿತ ಕಾರ್ಯಕ್ರಮಗಳನ್ನ ನಿಲ್ಲಿಸುತ್ತೆ ಅನ್ನೋ ಜನರ ಆತಂಕವೂ ದೂರವಾಗಿದೆ.
Hubballi: ಇಂದಿಗೂ ರಕ್ತವನ್ನು ಕೃತಕವಾಗಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ- ಶ್ರೀ ಬೂದೀಶ್ವರ ಮಹಾಸ್ವಾಮಿಗಳು
ಸರ್ಕಾರದ ಉಚಿತ ಗ್ಯಾರೆಂಟಿಗಳಿಂದಾಗಿ ಅನುದಾನ ಸಿಗ್ತಿಲ್ಲ ಕ್ಷೇತ್ರದ ಅಭಿವೃದ್ಧಿಯಾಗ್ತಿಲ್ಲ. ಜನಸಾಮಾನ್ಯರ ಕುಂದುಕೊರತೆ ಆಲಿಸೋಕೆ ಕಷ್ಟವಾಗ್ತಿದೆ, ಅಭಿವೃದ್ಧಿ ಕೆಲಸಗಳು ಕುಠಿತವಾಗಿವೆ. ಹೀಗಾಗಿ ಉಚಿತ ಯೋಜನೆಗಳನ್ನ ಪರಿಷ್ಕರಿಸಿ ಎಂದು ಸತೀಶ್ ಜಾರಕಿಹೊಳಿ ಸೇರಿ ಕೆಲ ಸಚಿವರು ಹೈಕಮಾಂಡ್ ಗೆ ಮನವಿ ಸಲ್ಲಿಸಿದ್ದರು. ಇದ್ರ ನಂತ್ರ ರಾಜ್ಯದಲ್ಲಿ ತರಹೇವಾರಿ ಚರ್ಚೆಗಳು ಶುರುವಾಗಿದ್ದವು ಈ ವಿಚಾರದಲ್ಲಿ ಸರ್ಕಾರದ ಸಚಿವರು,ಶಾಸಕರು ಕೆಲ ಗೊಂದಲದ ಹೇಳಿಕೆಗಳನ್ನ ಕೊಟ್ಟಿದ್ದರು. ಇದ್ರಿಂದ ಜನಸಾಮಾನ್ಯರಲ್ಲೂ ಗೊಂದಲ ಶುರುವಾಗಿತ್ತು ಎಲ್ಲಿ ಗ್ಯಾರೆಂಟಿ ಯೋಜನೆಗಳಿಗೆ ಬ್ರೇಕ್ ಬೀಳುತ್ತೋ ಸರ್ಕಾರ ಸಂಪೂರ್ಣ ನಿಲ್ಲಿಸುತ್ತೋ ಅಂತ ಜನಸಾಮಾನ್ಯರು ಗೊಂದಲಕ್ಕೀಡಾಗಿದ್ರು. ಇದೀಗ ಸ್ವತಃ ಸಿದ್ದರಾಮಯ್ಯನವರೇ ಈ ಗೊಂದಲಗಳಿಗೆ ಬ್ರೇಕ್ ಹಾಕಿದ್ದಾರೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತ್ರಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಗ್ಯಾರೆಂಟಿ ನಿಲ್ಲಿಸಲ್ಲ, ಎಲ್ಲವೂ ಮುಂದುವರೆಯುತ್ವೆ ಅಂತ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜಮಸಾಮಾನ್ಯರಲ್ಲಿ ಇದ್ದ ಆತಂಕ ಸ್ವಲ್ಪ ಮರೆಯಾದಂತೆ ಕಾಣ್ತಿದೆ..
ಇನ್ನು ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಅನ್ನೋ ಪ್ರತಿಪಕ್ಷ ನಾಯಕರಿಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ,ಯುವನಿಧಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಲಿದೆ. ಪ್ರತಿಕುಟುಂಬಕ್ಕೆ ನಾಲ್ಕೈದು ಸಾವಿರ ರೂಪಾಯಿ ಮಾಸಿಕ ಸಿಗಲಿದೆ ಅವರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೂ ಇದ್ರಿಂದ ಉಪಯೋಗವಾಗಲಿದೆ ಅಂತ ಸಿಎಂ ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳು ಟೀಕೆ ಮಾಡಬಹುದು,ಆದ್ರೆ ಅಭಿವೃದ್ಧಿಯ ಮೂಲಕ ಟೀಕೆಗೆ ಉತ್ತರ ಕೊಡ್ತೇವೆಂದಿದ್ದಾರೆ. ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಯಾವುದೇ ಕಾರಣಕ್ಕೂ ಗ್ಯಾರೆಂಟಿಗಳನ್ನ ನಿಲ್ಲಿಸಲ್ಲ ಅವು ನಿರಂತರವಾಗಿ ಮುಂದುವರಿಯಲಿವೆ ಅಂತ ಹೇಳಿದ್ದಾರೆ..
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಧ್ವನಿ ಎತ್ತಿದ್ದ ಸಚಿವ ಸತೀಶ್ ಜಾರಕಿಹೊಳಿ ಯೂಟರ್ನ್ ಹೊಡೆದಿದ್ದಾರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಚಿಂತನೆಯಿಲ್ಲ. ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ, ಜನರು ಗ್ಯಾರಂಟಿ ಇರಲಿ ಅಂದ್ರೆ ಮುಂದುವರೆಯುತ್ತವೆ.
ಜನರೇ ಬೇಡ ಅಂದ್ರೆ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ರಾಜ್ಯದ ಪ್ರಗತಿಗೆ ಅನುದಾನ ನೀಡ್ತಿದ್ದಾರೆ, ಅಭಿವೃದ್ಧಿಗೆ ಆದ್ಯತೆ ಸಿಗ್ತಿದೆ. ಇನ್ನೂ ನಾಲ್ಕು ವರ್ಷ ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ ಸತೀಶ್. ಸಚಿವ ಚಲುವರಾಯಸ್ವಾಮಿ ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ ಬಿಜೆಪಿ,ಜೆಡಿಎಸ್ ನವರಿಗೆ ಮಾನಮರ್ಯಾದೆ ಇಲ್ಲ, ನೀರಾವರಿಗೆ 5 ಸಾವಿರ ಕೋಟಿ ಕೊಟ್ರಾ, ಬೆಂಗಳೂರಿಗೆ 500 ಕೋಟಿ ಕೊಟ್ರಾ. ನಾನು ಹೇಳಿದ್ದೇ ಬೇರೆ ಅದನ್ನು ತಪ್ಪಾಗಿ ಅರ್ಥೈಸಲಾಗ್ತಿದೆ ಅಂತ ಗ್ಯಾರಂಟಿಗಳನ್ನ ಸಮರ್ಥಿಸಿಕೊಳ್ತಿದ್ದಾರೆ ಸಚಿವರು….