ಬೆಂಗಳೂರು:– ರಾಜ್ಯ ಸರ್ಕಾರದ ಉಚಿತ ಬಸ್ ಯೋಜನೆಯಿಂದ ಅನುಕೂಲ ಎಷ್ಟಿದೆಯೋ ಅಷ್ಟೇ ಅನಾನುಕೂಲ ಇದೆ. ತುಂಬಿ ತುಳುಕುತ್ತಿರುವ ಬಸ್ ನಲ್ಲಿ ಕಿಟಕಿ ಓಪನ್ ಮಾಡೋ ವಿಚಾರಕ್ಕೆ ಚಪ್ಪಲಿಯಿಂದ ಮಹಿಳೆಯರು ಹೊಡೆದಾಡಿದ್ದಾರೆ. ಬೆಂಗಳೂರಿನ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಮೆಜೆಸ್ಟಿಕ್ ಟು ಪೀಣ್ಯಾ ಬಸ್ ನಲ್ಲಿ ನಡೆದಿರೋ ಘಟನೆ ಇದಾಗಿದ್ದು, ಮೆಜೆಸ್ಟಿಕ್ ನಿಂದ ಪೀಣ್ಯಾ ಕಡೆ ಬಸ್ ಹೋಗ್ತಿತ್ತು. ರಾಜಾಜಿನಗರ ಠಾಣಾ ವ್ಯಾಪ್ತಿಯ ಮೂಲಕ ಹೋಗ್ತಿತ್ತು. ಈ ವೇಳೆ ಕಿಟಕಿ ತೆಗೆಯೋ ವಿಚಾರಕ್ಕೆ ಇಬ್ಬರು ಮಹಿಳೆಯರ ಮಧ್ಯೆ ಕಿರಿಕ್ ಉಂಟಾಗಿದೆ. ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ.