ಮಂಡ್ಯ: ರಾಜ್ಯಸಭಾ ಎಲೆಕ್ಷನ್ ವಿಚಾರದಲ್ಲಿ ಕೈ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆ ಆರೋಪ ಹಿನ್ನಲೆ, ಮಂಡ್ಯದ ಕೈ ಶಾಸಕ ರವಿಕುಮಾರ್ ಗಣಿಗ ವಿರುದ್ದ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರದಲ್ಲಿ ಮಾತನಾಡಿದ ಅವರು, ಕೋಟಿಗಟ್ಟಲೇ ಮಾನಹಾನಿಯ ಕೇಸ್ ದಾಖಲಿಸುವುದಾಗಿ ಪುಟ್ಟರಾಜು ಹೇಳಿಕೆ ನೀಡಿದ್ದಾರೆ. ಆತ ಇದ್ದಾರಲ್ಲ ಮಂಡ್ಯ ಶಾಸಕ ಆತನಿಗೆ ಶಾಸಕ ಸ್ಥಾನ ಸಿಕ್ಕಿರೋದು ಪೂರ್ವ ಜನ್ಮದ ಪುಣ್ಯ.
Bigg Impact: ನಮ್ಮ ಮೆಟ್ರೋದಲ್ಲಿ ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ: ವರದಿ ಬಳಿಕ BMRCL ಸಿಬ್ಬಂದಿ ವಜಾ!
ಅದನ್ನ ಹೆಂಗೆ ಉಳಿಸಿಕೊಂಡು ಕೇಮೇ ಮಾಡಬೇಕು ಅದನ್ನ ಮಾಡೋದನ್ನ ಕಲೀಲೀ. ಈ ತರಹದ ಲಘುವಾದ ಮಾತುಗಳು ಆರೋಪಗಳನ್ನು ಮಾಡೋದನ್ನ ಬಿಡಲಿ… ಇಂತಹ ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಸಾಕ್ಷಿ ಇರಬೇಕಲ್ಲ. ಈ ಆರೋಪಕ್ಕೆ ಆತ ಎಷ್ಟು ಕೋಟಿಗೆ ಮಾನನಷ್ಟ ಎದುಬೇಕಾಗುತ್ತದೆ ಅನ್ನೋದನ್ನ ತೋರೀಸ್ತಿನಿ.. ಇನ್ನೆರಡು ದಿನದಲ್ಲಿ ಆತನ ವಿರುದ್ದ ಡೆಫರ್ಮೇಶನ್ ಕೇಶ್ ದಾಖಲಿಸ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.