ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸ್ವಾಗತಿಸಿದ ಮಾಜಿ ಸಿಎಂ ಯಡಿಯೂರಪ್ಪ ಶಾಮನೂರು ಅವರು ನಮ್ಮ ಸಮಾಜದ ಹಿರಿಯ ಮುಖಂಡರು ಅವರಂಥ ಹಿರಿಯರು ಆಶೀರ್ವಾದ ಮಾಡಿರೋದು ಸಂತೋಷ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಲು ಶ್ಯಾಮನೂರು ಕರೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಯಡಿಯೂರಪ್ಪನವರು ಮಾತನಾಡಿ, ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತೋಷ ತಂದಿದೆ
ಶಾಮನೂರು ಅವರಂಥ ಹಿರಿಯರು ಆಶೀರ್ವಾದ ಮಾಡಿರೋದು ಸಂತೋಷ ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
2024ರ ಈ ವರ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ನಡೆಯುತ್ತಿರೋ ಮೊದಲ ಕಾರ್ಯಕಾರಿಣಿ. ನಿಮ್ಮೆಲ್ಲರಿಗೂ ಸ್ವಾಗತ, ಅಭಿನಂದನೆ. ಭಾರತೀಯರ 500 ವರ್ಷಗಳ ಕನಸು ರಾಜಮಂದಿರ ನಿರ್ಮಾಣ ಆಗಿದೆ. ಕರ್ನಾಟಕಕ್ಕೂ, ಅಯೋಧ್ಯೆಗೂ ಅವಿನಾಭಾವ ಸಂಬಂಧ ಇದೆ.
ಅಯೋದ್ಯೆಯಲ್ಲಿ ನಿರ್ಮಾಣ ಆದ ಬಾಲರಾಮ ಎಲ್ಲರಿಗೂ ಹೆಮ್ಮೆ. ಮೋದಿ ಅವರ ನೇತೃತ್ವದಲ್ಲಿ, ಭಾರತ ಹತ್ತು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕಂಡಿದೆ. ನಮ್ಮೆಲ್ಲರಿಗೂ ಮುಂದೆ ಸತ್ವ ಪರೀಕ್ಷೆ ಇದೆ.
ಕಳೆದ ಬಾರಿಬ25 ಸ್ಥಾನ ಗೆಲ್ಲಿಸಿ ಕೊಡೋದಾಗಿ ಹೇಳಿದ್ದೆವು. 26 ಕ್ಷೇತ್ರ ಅವರಿಗೆ ಕೊಟ್ಟಿದ್ದೆವು. ಈ ಬಾರಿ 28ಕ್ಕೆ 28ಕ್ಷೇತ್ರ ಗೆಲ್ಲಿಸಿಕೊಡ್ತೀವಿ ಅಂತ ಹೇಳಿದ್ದೇವೆ ನಮ್ಮಮುಂದಿನ ಸವಾಲು ಹೆಚ್ಚಿದೆ. ಜನರಿಗೆ ಸುಳ್ಳು ಹೇಳಿ ಬಂದಿರೋ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸಿದೆ. ಜನರಿಗೆ ವಾಸ್ತವ ಅರಿಯುವ ಸವಾಲು ನಮಗಿದೆ. ಈ ಸರ್ಕಾರ ಯಾಕೆ ತಂದೆವು ಅಂತ ಶಾಪ ಹಾಕ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.