ಬೀದರ್:- ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ‘ಬಿ’ ಗ್ರಾಮದಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ಎರಡು ರಾಜ್ಯದ ಗಡೀಯಲ್ಲಿರುವ ಬೀದರ್ ಜಿಲ್ಲೆಯ ರೈತನ ಗೋಳನ್ನ ರೈತರು ಯಾರ ಬಳಿ ಹೇಳಬೇಕು ಅನ್ನೋದೆ ಅವರಿಗೆ ತಿಳಿಯುತ್ತಿಲ್ಲ.
ಸರ್ಕಾರ ಉರುಳಿಸಲು ಬಿಜೆಪಿ- ಜೆಡಿಎಸ್ ಷಡ್ಯಂತ್ರ ಮಾಡ್ತಿದೆ: MB ಪಾಟೀಲ್
ಕಳೆದ ವರ್ಷ ಬರಗಾಲದಿಂದಾಗಿ ಮುಂಗಾರು ಬೆಳೆ ನಾಶವಾಗಿ ರೈತನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ಇನ್ನೂ ಇಂಗಾರು ಬೆಳೆಗೆ ಕೂಡಾ ನೀರಿನ ಸಮಸ್ಯೆಯಿಂದಾಗಿ ಬೆಳೆ ಕಳೆದುಕೊಂಡು ರೈತರು ಸಾಲದ ಸುಳಿಯಲ್ಲಿದ್ದಾರೆ. ಕಾಡು ಹಂದಿಗಳ ಕಾಟದಿಂದ ಬೆಸತ್ತಿರುವ ರೈತರು ತಮ್ಮ ಬೆಳೆಯನ್ನ ಉಳಿಸಿಕೊಳ್ಳಲು ಪಡಬಾರದ ಕಷ್ಟ ಪಡುತ್ತಿದ್ದಾರೆ.
ಇನ್ನೂ ಕಬ್ಬು ಬೆಳೆಸಿದ ರೈತರು ಕೂಡಾ ನೀರಿನ ಸಮಸ್ಯೆಯಿಂದಾ ಜಿಲ್ಲೆಯಲ್ಲಿ ಶೇಕಡಾ 10 ರಷ್ಟು ಕಬ್ಬು ನೀರಿನ ಕೊರತೆಯಿಂದಾಗಿ ಬಾಡಿ ಹೋಗಿದೆ. ಇದರ ನಡುವೆ ಈಗ ಕಬ್ಬು ಬೆಳೆಗೆ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದ್ದು ಒಂದೆ ರಾತ್ರಿಗೆ ಹತ್ತಾರು ಎಕರೆಯಷ್ಟು ಕಬ್ಬು ತಿಂದು ನಾಶಮಾಡುತ್ತಿದ್ದು ಇದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದಕ್ಕೆ ತಾಜಾ ಉದಾಹರಣೆ ಹೇಳಬೇಕೆಂದರೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಬಿ ಗ್ರಾಮದ ರೈತರಾದ ಸಂತೋಷ್ ಮಸ್ಕಲ್, ರಮೇಶ್ ನಾಗರೆಡ್ಡಿ, ಶ್ರೀಕಾಂತ್ ರೆಡ್ಡಿ ಸೇರಿದಂತೆ ಹತ್ತಕ್ಕೂ ಹೆಚ್ಚ ರೈತರ ಸುಮಾರು 20 ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಬೆಳೆಸಿದ್ದ ಕಬ್ಬನ್ನ ತಿಂದು ನಾಶಮಾಡಿವೆ. ಎಕರೆಗೆ ಮೂರು ಲಕ್ಷ ರೂ. ಪ್ರತಿ ವರ್ಷ ಕಬ್ಬು ಆದಾಯ ಬರುತ್ತಿತ್ತು. ಇಂದು ಸುಮಾರು ಎಲ್ಲಾ ರೈತರ 60 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಕಾಡು ಹಂದಿಗಳು ಹಿಂಡಾಗಿ ನುಗ್ಗಿ ಒಂದೆ ರಾತ್ರಿಯಲ್ಲಿ ಇಡೀ ಕಬ್ಬು ಹೊಲವನ್ನೇ ತಿಂದು ಹಾಕಿದ್ದು ನಮಗೆ ಭಾರೀ ನಷ್ಟವಾಗಿದೆ ಎಂದು ರೈತ ನರಸಪ್ಪ ಹೇಳಿದ್ದಾರೆ.
ಒಂದೆ ರಾತ್ರಿಯಲ್ಲಿ ಈ ಕಾಡು ಪ್ರಾಣಿಗಳು ಎಕರೆಗಟ್ಟಲೇ ಬೆಳೆಯನ್ನ ತಿಂದು ನಾಶ ಮಾಡಿಹೋಗುತ್ತಿವೇ ಆದರೆ ರೈತರ ಸಮಸ್ಯೆ ಸ್ಫಂದಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಮ್ಮ ನೋವನ್ನು ಯಾರಿಗೆ ಹೇಳಬೇಕೆಂದು ಇಲ್ಲಿನ ರೈತರ ಅಳಲಾಗಿದೆ.