ಕಲಬುರ್ಗಿ:- ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನಲೆ ಕಲಬುರಗಿಯಲ್ಲಿ ರಾಮೋತ್ಸವ ಆಚರಿಸಿದ್ದು ಖಮಿತಕರ್ ಸೇವಾ ಬಳಗದಿಂದ ಅನ್ನದಾನ ಕಾರ್ಯ ಮಾಡಲಾಯಿತು.
ನಗರದ ಕೃಷ್ಣೇಶ್ವರ ಗುಡಿಯಲ್ಲಿ ಇವತ್ತು ನಿರಂತರ ಪೂಜಾ ಕೈಂಕರ್ಯ ನಡೆದಿದ್ದು ರಾಮೋತ್ಸವದಲ್ಲಿ ಭಾಗಿಯಾದ ನೂರಾರು ಭಕ್ತರಿಗೆ ಅನ್ನದಾನ ಸೇವಾ ವ್ಯವಸ್ಥೆ ಮಾಡಲಾಗಿತ್ತು.
ಸಂಸದ ಡಾ. ಉಮೇಶ್ ಜಾಧವ್ ಹಾಗು RSS ಪ್ರಮುಖರು ಸೇರಿದಂತೆ ನೂರಾರು ರಾಮ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.