ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪೊಲೀಸ್ ಠಾಣಾಧಿಕಾರಿ ಶಾಂತಾ ಹಳ್ಳಿ ಅವರು ಜಮಖಂಡಿ-ಕಾಗವಾಡ ರಾಜ್ಯಹೆದ್ದಾರಿಯಲ್ಲಿ ಸಂಚಾರಿ ನಿಯಮ ಪಾಲನೆಯ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸಿದರು.
ಇಂದು ರಸ್ತೆಯಲ್ಲಿ ಸವಾರರಿಗೆ, ಮಕ್ಕಳ ಕೈಯಲ್ಲಿ ಬೈಕ್ ಕೊಡಬೇಡಿ, ಮಕ್ಕಳಿಂದ ಅಪಘಾತವಾದರೇ ಬೈಕ್ ಕೊಟ್ಟವರು, ಮಾಲಕರು, ಪಾಲಕರು ಹಾಗೂ ಮಗುವಿನ ಮೇಲೂ ಪ್ರಕರಣ ದಾಖಲಾಗುತ್ತದೆ. ಹಾಗೂ ವಿಮೆ, ರಿನಿವಲ್, ಹೆಲ್ಮೆಟ್, ಸೀಟ್ ಬೇಲ್ಟಗಳಂತಹ ನಿಯಮಗಳನ್ನು ಪಾಲಿಸಿದರೇ ಜೀವಹಾನಿ ತಪ್ಪಿಸಬಹುದು ಎಂದು ತಿಳಿಹೇಳಿದರು.
ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಶ್ರೀಗಂಧ ಮರ ಕಡಿದು ಕಳ್ಳತನ ; ಮೂವರ ಬಂಧನ
ಹೆಲ್ಮೆಟ್ ಹಾಗೂ ಸಿಟ್ ಬೆಲ್ಟ್ ಇಲ್ಲದ ವ್ಯಕ್ತಿಗೆ 500 ಫೈನ್ ಹಾಕುವುದರ ಮುಖಾಂತರ ಕಾರ್ಯಕ್ಕೆ ಖಾಕಿ ಪಡೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಹುಬ್ಬೆರುವಂತೆ ಮಾಡಿದೆ. ಇದೇ ವೇಳೆ ಜಮಖಂಡಿ ಡಿವೈಎಸ್ಪಿ, ಸೈಯದ್ ಜಮೀರ್ ಎಸ್ ಭೇಟಿ ನೀಡಿ ಕಾರ್ಯವನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಬನಹಟ್ಟಿ ಠಾಣಾ ಅಧಿಕಾರಿಗಳದ ASI ಎಸ್.ಎಸ್ ಬಾಬಾನಗ̧ರ ಎ.ಎ. ಪಟ್ಟಣಶೆಟ್ಟಿ, ಎಮ್. ಎನ್. ಕಾಗವಾಡ, ಭಾಗಿಯಾಗಿದ್ದರು.