ಮಳೆಯಿಂದಾಗಿ ಬೆಳೆದ ಬೆಳೆಗಳಿಗೆ ಕೂಡ ಹಾನಿಯಾಗುತ್ತಿದ್ದು, ಮಾರುಕಟ್ಟೆಗೆ ಸರಿಯಾಗಿ ತರಕಾರಿ- ಹೂಗಳು ಬರುತ್ತಿಲ್ಲ. ಹೀಗಾಗಿ ತರಕಾರಿ ಹಾಗೂ ಹೂಗಳ ಬೆಲೆ ಏರಿಕೆಯಾಗಿದೆ.
Attack Terror: ಮತ್ತೆ ಉಗ್ರರ ದಾಳಿ: ರಜೌರಿಯಲ್ಲಿ ಯೋಧನಿಗೆ ಗಂಭೀರ ಗಾಯ!
ಸಾಮಾನ್ಯವಾಗಿ 70-80 ರೂ. ಇರಬೇಕಿದ್ದ ಸೇವಂತಿಗೆ ಹೂವು ಇದೀಗ ಸಗಟು ಮಾರುಕಟ್ಟೆಯಲ್ಲಿಯೇ 250-300 ರೂ.ಗೆ ಮಾರಟವಾಗುತ್ತಿದ್ದರೆ, ಚಿಲ್ಲರೆ ಮಾರಾಟಗಾರರು ಕಾಲು ಕೆ.ಜಿ. ಸೇವಂತಿ ಹೂವಿಗೆ 100 ರೂ.ಗೆ ಮಾರುತ್ತಿದ್ದಾರೆ. ಇನ್ನು ಕೆಜಿಗೆ 400 ರೂ ನಗದಿ ಮಾಡಲಾಗಿದೆ. ಸದ್ಯ ಕಾಕಡ 500, ಮಲ್ಲಿಗೆ 300, ಕನಕಾಂಬರ 800, ಗುಲಾಬಿ – 200 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಆಷಾಢ ಮಾಸದಲ್ಲಿಯೇ ಇಷ್ಟೊಂದು ಬೆಲೆ ಏರಿಕೆಯಾಗಿದ್ದು, ಶ್ರಾವಣ ಮಾಸದಲ್ಲಿ ಹೂವಿನ ಬೆಲೆ ಇನ್ನೆಷ್ಟು ಏರಿಕೆಯಾಗಬಹುದು ಎಂಬ ಆತಂಕದಲ್ಲಿ ಗ್ರಾಹಕರು ಇದ್ದಾರೆ.
ಹೂವಿನ ಜೊತೆಗೆ ತರಕಾರಿಗಳ ಬೆಲೆಯೂ ಏರಿಕೆಯಗಿದ್ದು, ಟೊಮೆಟೊ ದರ ಕೆಜಿಗೆ 100 ರೂ. ಸಮೀಪ ಬಂದು ನಿಂತಿದೆ. ಇನ್ನು ಉಳಿದ ಕ್ಯಾರೆಟ್, ಬಟಾಣಿ, ಈರುಳ್ಳಿ ಬೆಲೆಯು ಜಾಸ್ತಿಯಾಗುತ್ತಿದೆ. ಸದ್ಯ ಹೆಚ್ಚು ಮಳೆಯಾಗುತ್ತಿರುವುದರಿಂದ ತರಕಾರಿಗಳು ಕೊಳೆತು ಹೋಗುತ್ತಿದ್ದು, ಮಾರುಕಟ್ಟೆಗೆ ಹೆಚ್ಚು ತರಕಾರಿಗಳು ಪೂರೈಕೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಮಳೆ ಹೆಚ್ಚಾದ್ರೆ ತರಕಾರಿಗಳ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದೆ.