ಗುಜರಾತ್:- ಇಲ್ಲಿನ ರಾಜ್ಕೋಟ್ ಅಗ್ನಿ ಅವಘಡ ಸಂಬಂಧಿಸಿದ್ದು, ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಅವಘಡದಲ್ಲಿ 35 ಮಂದಿ ಸಜೀವದಹನಗೊಂಡಿದ್ದಾರೆ. ಐದು ಸದಸ್ಯರ ತಂಡ ಪ್ರಕರಣದ ತನಿಖೆ ಮಾಡಲಿದೆ. 72 ಗಂಟೆಗಳೊಳಗೆ ಪ್ರಾಥಮಿಕ ವರದಿಯನ್ನು ನೀಡಲಿವೆ. ಅಗ್ನಿ ಅವಘಡಕ್ಕೆ ಕಾರಣವೇನು?,
ದೆಹಲಿ: ಬೇಬಿ ಕೇರ್ ಸೆಂಟರ್ನಲ್ಲಿ ಅಗ್ನಿ ಅವಘಡ.. 6 ನವಜಾತ ಶಿಶುಗಳು ಸುಟ್ಟು ಕರಕಲು.!
ಗೇಮಿಂಗ್ ಝೋನ್ಗೆ ಅನುಮತಿ ನೀಡುವ ಸಂದರ್ಭದಲ್ಲಿ ಈ ಕೆಲವು ವಿಷಯಗಳ ಬಗ್ಗೆ ಗಮನಹರಿಸಲಾಗಿತ್ತೆ?, ಗೇಮಿಂಗ್ ಝೋನ್ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರೇ? ಎಂಬೆಲ್ಲಾ ವಿಚಾರಗಳ ಕುರಿತು ತನಿಖೆ ನಡೆಸಲಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಗೇಮ್ ಝೋನ್ ಸುಟ್ಟು ಕರಕಲಾಗಿದೆ.