ಕಲಬುರ್ಗಿ:- ಪಾನಿಪುರಿ ಬಿಲ್ ವಿಚಾರಕ್ಕೆ ನಡೆದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಕಲಬುರಗಿಯಲ್ಲಿ ನಡೆದಿದೆ..ಅಳಂದ ತಾಲೂಕಿನ ಧಂಗಾಪುರ ಬಳಿ ಘಟನೆ ನಡೆದಿದ್ದು ಭೀಮಶ್ಯಾ ಕೊಲೆಯಾದ ದುರ್ದೈವಿಯಾಗಿದ್ದಾನೆ.
ರಮೇಶ್ ಹಾಗು ಪ್ರವೀಣ್ ನಡುವೆ ಪಾನಿಪುರಿ ತಿನ್ನೋ ವೇಳೆ ಜಗಳವಾಗಿದೆ. ಪಾನಿಪುರಿ ತಿಂದು ಪ್ರವೀಣ್ 40 ರೂಪಾಯಿ ಫೋನ್ ಪೇ ಮಾಡಿದ್ದ. ಆದ್ರೆ
ಫೋನ್ ಪೇ ಸೆಂಡ್ ಆಗದ ಹಿನ್ನಲೆ ಪಕ್ಕದಲ್ಲಿದ್ದ ರಮೇಶ್ ಹಣ ಕೊಡಲು ಮುಂದಾಗಿದ್ದಾನೆ. ಕೂಡಲೇ
ರೊಚ್ಚಿಗೆದ್ದ ಪ್ರವೀಣ್
ನನಗೇ ನೀನು ಹಣ ಕೊಡಲು ಬರ್ತಿಯೇನು ಅಂತ ಪ್ರಶ್ನೆ ಮಾಡಿ ಜಗಳ ತೆಗೆದಿದ್ದಾನೆ.
ಅದೇ ಜಗಳ ನಂತ್ರ ಮನೆ ಬಳಿ ರಿಪಿಟ್ ಆಗಿದೆ..ಇದೇವೇಳೆ ಇಬ್ಬರ ಜಗಳ ಬಿಡಿಸಲು ಹೋದ ರಮೇಶನ ತಂದೆ ಭೀಮಶ್ಯಾ ಮೇಲೆ ಪ್ರವೀಣ್ ಹಲ್ಲೆ ಮಾಡಿದ್ದಾನೆ..ಗಂಭೀರವಾಗಿ ಗಾಯಗೊಂಡಿದ್ದ ಭೀಮಶ್ಯಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಕುರಿತು ನಿಂಬರ್ಗಾ ಪೋಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ..