ಗದಗ:- 34 ಎಕರೆ ಜಾಗಕ್ಕಾಗಿ ಕಾನೂನು ಸಚಿವ ಪಾಟೀಲ್ ಮತ್ತು ಗದಗ ನಗರಸಭೆ ಮಧ್ಯೆ ಫೈಟ್ ನಡೆದಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ.
ನಗರಸಭೆ ಒಡೆತನದ ನೂರಾರು ಕೋಟಿ ಮೌಲ್ಯದ 34 ಎಕರೆ ಜಾಗದ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಹೀಗಾಗಿಯೇ ಮೊನ್ನೆ ನಡೆದ ಅಧಿವೇಶನದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಅದು ಕೂಡಾ ನಗರಸಭೆ ಗಮನಕ್ಕೆ ತಂದಿಲ್ಲ! ಹೀಗಾಗಿ ಬಿಜೆಪಿ ಆಡಳಿತಾರೂಢ ಗದಗ ಬೆಟಗೇರಿ ನಗರಸಭೆ ಆಡಳಿತ ರೊಚ್ಚಿಗೆದ್ದಿದೆ. ಕಾನೂನು ಸಚಿವ ಎಚ್ ಕೆ ಪಾಟೀಲ್ ವಿರುದ್ಧ ಹೋರಾಟದ ಕಹಳೆ ಊದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಕಾನೂನು ಸಚಿವ ಎಚ್ ಕೆ ಪಾಟೀಲ್ ವಿರುದ್ಧ ನಗರಸಭೆ ಅಧ್ಯಕ್ಷೆ ವಾಗ್ದಾಳಿ, ನಮ್ಮ ಆಸ್ತಿ ನಮ್ಮ ಹಕ್ಕು, ಇದು ಯಾರೂ ಲೂಟಿ ಮಾಡೋಕ್ಕಾಗಲ್ಲ ಅಂತ ಆಕ್ರೋಶ. ಕೂಡಲೇ ಪ್ರಾಧಿಕಾರ ರದ್ದು ಮಾಡಬೇಕು ಇಲ್ಲಾಂದ್ರೆ ಹೋರಾಟ ಮಾಡಬೇಕಾಗುತ್ತೆ ಅಂತ ಗುಡುಗು. ಹೌದು ಇದು ಗದಗ-ಬೆಟಗೇರಿ ನಗರಸಭೆ ನೂರಾರು ಕೋಟಿ ಆಸ್ತಿ ಕುಸ್ತಿ.
ಹೌದು ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ ಇದೆ. ನಗರಸಭೆ ಒಡೆತನದ 34 ಎಕರೆ ಜಾಗದಲ್ಲಿ 54 ವಖಾರವನ್ನು ಹೊಂದಿತ್ತು. ಲೀಜ್ ಮುಗಿದ್ರು ಖಾಸಗಿ ಮಾಲೀಕ್ರು ಜಾಗ ಖಾಲಿ ಮಾಡಿರಲಿಲ್ಲ. ಹೀಗಾಗಿ 2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವ್ರು ಗಟ್ಟಿ ನಿರ್ಧಾರದಿಂದ ಎಲ್ಲವೂ ಖಾಲಿ ಮಾಡಿಸಲಾಗಿದೆ.
ಇದೇ ಈವಾಗ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ನಗರಸಭೆ ಆಡಳಿತವನ್ನು ಕೆರಳುವಂತೆ ಮಾಡಿದೆ. ನಗರಸಭೆ ಆಡಳಿತದ ಗಮನಕ್ಕೆ ತರದೆ ಸರ್ವಾಧಿಕಾರಿ ಧೋರಣೆಯಿಂದ ಸಚಿವ ಎಚ್ ಕೆ ಪಾಟೀಲ್ ಮಾಡಿದ್ದಾರೆ ಅಂತ ಅಧ್ಯಕ್ಷೆ ಉಷಾ ದಾಸರ ಕೆಂಡಕಾರಿದ್ದಾರೆ. ಹೀಗಾಗಿ ಸಂವಿಧಾನಾತ್ಮಕವಾಗಿ ನಗರಸಭೆ ತನ್ನದೆಯಾದ ಹಕ್ಕುಗಳಿವೆ. ಅದನ್ನು ಕಸಿದುಕೊಂಡು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ನಮ್ಮ ಆಸ್ತಿ ನಮ್ಮ ಹಕ್ಕು, ನಮ್ಮ ಜಾಗವನ್ನು ಬಿಡುಕೊಡುವ ಪ್ರಶ್ನೆಯೇ ಇಲ್ಲ. ಸಚಿವರ ನಿರ್ಧಾರದ ವಿರುದ್ಧ ಹೋರಾಟ ಮಾಡುವುದಾಗಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)