ಬೀದರ್ : ಅನ್ಯ ವ್ಯಕ್ತಿಯ ಜೊತೆಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಪತಿರಾಯ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್ ತಾಲೂಕಿನ ಅಣದೂರ್ ಗ್ರಾಮದಲ್ಲಿ ನಡೆದಿದೆ…
27 ವರ್ಷದ ದಾಸರ್ ಎಂಬ ನತದೃಷ್ಠ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ಗ್ರಾಮದ ಜನರು ಕುಡಿಯುವ ವಾಟರ್ ಟ್ಯಾಂಕ್ನಲ್ಲಿ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ…
Bengaluru: ಬಿಲ್ಡರ್ಗಳಿಗೆ ಬೆಳ್ಳಂ ಬೆಳಗ್ಗೆ ಐಟಿ ಶಾಕ್ – 20 ಕಡೆ ದಾಳಿ, ಪರಿಶೀಲನೆ!
ಎರಡು ದಿನಗಳ ಹಿಂದೆ ಟ್ಯಾಂಕ್ ಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಟ್ಯಾಂಕರ್ ನೀರನ್ನೆ ಅಣದೂರ ಗ್ರಾಮದ ಎರಡು ವಾಡಿನ ಜನ್ರು ಕುಡಿದಿದ್ದಾರೆ…
ನೀರು ವಾಸನೆ ಬರುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಇಂದು ವಾಟರ್ ಟ್ಯಾಂಕ್ ಚೆಕ್ ಮಾಡಿದಾಗ ಶವ ಪತ್ತೆಯಾಗಿದ್ದು ಶವ ಇದ್ದ ನೀರು ಕುಡಿದ ಗ್ರಾಮಸ್ಥರು ಆತಂಕಗೊಂಡಿದ್ದಾರೆ… ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ವಾಟರ್ ಟ್ಯಾಂಕ್ ನಿಂದ ಶವವನ್ನು ಮೇಲೆತ್ತುತ್ತಿದ್ದು ಸ್ಥಳದಲ್ಲಿ ಸಂಬಂಧಕರ ಆಕ್ರಂಧನ ಮುಗಿಲು ಮುಟ್ಟಿದೆ…
ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…