ಗದಗ: ಗದಗ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಫೆ.15, 16 ಮತ್ತು 17 ರಂದು ಮೌನಯೋಗಿ ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ 29 ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ. ಆ ಕುರಿತು ಗದಗ ನಗರದ ಪತ್ರಿಕಾಭವನದಲ್ಲಿ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಸುದ್ದಿಗೋಷ್ಠಿ ನಡೆಸಿ ಮಾನಾಡಿದ್ರು.
ಫೆ.15 ರಂದು ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ ಜರುಗಲಿದ್ದು ಸಂಜೆ ಸಂಜೆ ರಥದ ಕಳಸ ಆಗಮಿಸುವುದು ಮತ್ತು ಲಘು ರಥೋತ್ಸವ ಹಾಗೂ ಮಹಾತ್ಮರ ಜೀವನ ದರ್ಶನ ಮಂಗಲೋತ್ಸವ ಜರುಗುವುದು. ಫೆ. 16 ರಂದು ಶ್ರೀ ಚನ್ನವೀರ ಶರಣರ 29 ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಜರುಗುವವು. ಸಂಜೆ ಮಹಾರಥೋತ್ಸವ ಹಾಗೂ ಧಾರ್ಮಿಕ ಚಿಂತನಾಗೋಷ್ಠಿ ನಡೆಯಲಿವೆ.
ಕೊಪ್ಪಳದ ಗವಿಮಠದ ಪೂಜ್ಯ ಶ್ರೀ ಗವಿಸಿಧ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಫೆ. 17 ರಂದು ಕಡುಬಿನ ಕಾಳಗ, ಮಲ್ಲಕಂಬ ಪ್ರದರ್ಶನ, ಹಾಸ್ಯ ಸಂಜೆ ಕಾರ್ಯಕ್ರಮ, ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಲಿವೆ ಭಕ್ತಾದಿಗಳು ಆಗಮಿಸಬೇಕೆಂದು ತಿಳಿಸಿದ್ರು. ಪತ್ರಿಕಾಗೋಷ್ಠಿಯಲ್ಲಿ ಎ ಎನ್ ನಾಗರಳ್ಳಿ, ವಿ ಬಿ ಪೊಲೀಸಪಾಟೀಲ, ಎಂ ಬಿ ಸಿಕ್ಕೇದೇಸಾಯಿ, ವಿ ಎಸ್ ಹಿರೇಮಠ, ಎಸ್ ಬಿ ಪಾಟೀಲ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.