ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ನಡುವೆ ಇಲಿ ಜ್ವರದ ಆತಂಕ ಶುರುವಾಗಿದೆ. ಮಳೆ ಶುರುವಾಗುತ್ತಿದ್ದಂತೆ ಇಲಿಗಳಿಂದ ಹರಡುವ ಇಲಿ ಜ್ವರ ಬರುವ ಸಾಧ್ಯತೆ ಇದ್ದು ರಾಜಧಾನಿಯ ವೈದ್ಯರು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಶೀಘ್ರವೇ ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗ ಶುರು!
ಇಲಿಗಳಿಂದ ಲೆಪ್ಟೊಸ್ಪೈರೋಸಿಸ್ ಅಂದ್ರೆ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ. ಬೆಂಗಳೂರು ವೈದ್ಯರು ಇಲಿ ಜ್ವರದ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವನ ಚರ್ಮಕ್ಕೆ ತಾಗುವುದರಿಂದ ಈ ಸೋಂಕು ಹರಡುತ್ತದೆ. ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು, ತೀವ್ರ ಜ್ವರ ಲಕ್ಷಣಗಳಾದರೆ, ಸೋಂಕು ಉಂಟಾದ ಎರಡು ದಿನಗಳ ನಂತರ ಕೀಲುನೋವು ಕಂಡುಬರುತ್ತಿದ್ದು ಈ ಲಕ್ಷಣ ಕಂಡು ಬಂದರೆ ಎಚ್ಚರ ವಹಿಸಿ ಎಂದು ವೈದ್ಯರು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಮಳೆಯಿಂದ ಇಲಿಗಳ ಸಂಚಾರ ಆರಂಭವಾಗಿದೆ. ಹೀಗಾಗಿ ಇಲಿ ಜ್ವರ ಶುರುವಾಗುವ ಆತಂಕವನ್ನ ವೈದ್ಯರು ಹೊರ ಹಾಕಿದ್ದಾರೆ. ಡೆಂಗ್ಯೂ, ಚಿಕುನ್ ಗುನ್ಯಾ ಅನೇಕ ವೈರಲ್ ಖಾಯಿಲೆಗಳ ನಡುವೆ ಈಗ ಮತ್ತೊಂದು ಆತಂಕ ಕಂಡು ಬರ್ತಿದೆ. ಮಳೆಗಾಲದಲ್ಲಿ ಮನೆಯ ಸಂಪ್ಗಳು ನೀರಿನ ಬಗ್ಗೆ ಎಚ್ಚರ ವಹಿಸಿ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯೆ ರೇಖಾ ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದಲ್ಲಿ ಇಲಿ ಜ್ವರ ಹೆಚ್ಚಾಗಲಿದೆ. ಕಳೆದ ವರ್ಷ ನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಇಲಿ ಜ್ವರದ ಪ್ರಕರಣ ದಾಖಲಾಗಿದ್ದವು. ಈ ವರ್ಷ ಮಳೆಗಾಲದ ಆರಂಭದಲ್ಲೇ ಇಲಿ ಜ್ವರ ಪತ್ತೆಯಾಗ್ತೀವೆ. ಈ ಹಿನ್ನೆಲೆ ಆಸ್ಪತ್ರೆಗಳಲ್ಲಿ ಇಲಿಜ್ವರ ಚಿಕಿತ್ಸೆಗೆ ಸಿದ್ದತೆ ಶುರುವಾಗಿದೆ. ಈಗಾಗಲೇ ಹಾವೇರಿಯಲ್ಲಿ ಇಲಿಜ್ವರಕ್ಕೆ ಒಂದು ಬಲಿಯಾಗಿದೆ. ಇಲಿಗಳಿಂದ ದೂರ ಇರಿ ಎಂದು ಡಾ.ರೇಖಾ ತಿಳಿಸಿದ್ದಾರೆ.
ಇನ್ನು ವಾಂತಿ ಬೇಧಿ, ಮೈ ಮೇಲೆ ಗುಳ್ಳೆಗಳು ಬಂದ್ರೆ ವೈದ್ಯರನ್ನ ಸಂಪರ್ಕಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಿಸುವಂತೆ ಹೇಳಿದ್ದಾರೆ. ಇಲಿ ಜ್ವರವನ್ನ ನೈರ್ಮಲ್ಯ, ಪರಿಸರ ನಿರ್ವಹಣೆ ಮತ್ತು ಅಪಾಯದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ತಡೆಗಟ್ಟಬಹುದಾಗಿದೆ. ಮನೆಯಲ್ಲಿ ಅಥವಾ ಉಗ್ರಾಣಗಳಲ್ಲಿ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಬಿಸಿ ನೀರು ಸೇವನೆ ಮಾಡುವ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ