ಕಲಘಟಗಿ: ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಪಾದಚಾರಿ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೆ ಯುವಕ ಮೃತಪಟ್ಟಿದ್ದಾನೆ.
Mysuru Dasara: ದಸರಾ ಸಂಭ್ರಮ ಮಹೋತ್ಸವಕ್ಕೆ ವರುಣನ ಎಂಟ್ರಿ: ಆದ್ರೂ ಜನರು ಉತ್ಸಾಹದಿಂದ ಭಾಗಿ!
ಡಿಕ್ಕಿಯಾದ ರಭಸಕ್ಕೆ ದೇಹದ ಅಂಗಾಂಗಗಳು ಛಿದ್ರವಾಗಿವೆ. ಯುವಕನ ಹೃದಯ ಬೇರ್ಪಟ್ಟು ರಸ್ತೆ ಮೇಲೆ ಬಿದ್ದರೂ ಮಿಡಿಯುತ್ತಿರುವುದನ್ನು ಕಂಡ ಸ್ಥಳೀಯರು ಮಮ್ಮಲ ಮರುಗಿದ್ದಾರೆ.
ಮೃತಪಟ್ಟಿರುವ ಯುವಕ ಸುಭಾಸ್ ಗುಂಡಪ್ಪನವರ ಎಂದು ತಿಳಿದು ಬಂದಿದೆ.ಈತ ಕಲಘಟಗಿ ತಾಲ್ಲೂಕಿನ ಸುಲಿಕಟ್ಟಿ ಗ್ರಾಮದವನು ಎಂದು ಹೇಳಲಾಗುತ್ತಿದೆ.ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದು ತನಿಖೆ ಕೈಗೊಂಡಿದ್ದಾರೆ .
ವರದಿ: ಮಾರುತಿ ಲಮಾಣಿ ಕಲಘಟಗಿ