ಬೆಂಗಳೂರು: ರಾಜ್ಯದಲ್ಲೂ ವಿವಿಧ ಬೇಡಿಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ರು. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತರು ಪರವಾಗಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೃಷಿ ಸಚಿವರ ಕಾರಿಗೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ್ರು.
ಒಂದ್ಕಡೆ ಬೇಕೆ ಬೇಕು ನ್ಯಾಯ ಬೇಕೆಂದು ರೈತರು ಕೂಗಾಟ. ಮತ್ತೊಂದು ಕಡೆ ಕೃಷಿ ಸಚಿವ ಮುಂದೆ ರೈತ ಮಹಿಳೆ ಕಣ್ಣೀರು. ಈ ಎಲ್ಲಾ ದೃಶ್ಯಕಂಡು ಬಂದಿದ್ದು, ನಗರ ಪ್ರೀಡಂ ಪಾಕ್೯ನಲ್ಲಿ..
ಬೈಕ್ ಬೆಲೆ 60ಸಾವಿರ, ಫೈನ್ ಇರೋದು ಒಂದೂವರೆ ಲಕ್ಷ: ಪೊಲೀಸರ ಕೈಗೆ ಸಿಕ್ಕಿದ್ದೆ ರೋಚಕ!
ಹೌದು ಮುಖ್ಯಮಂತ್ರಿ ನಿನ್ನೆ ಮಂಡಿಸಿದ ಬಜೆಟ್ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿರಸ್ಕರಿಸಿದೆ. ರೈತರು ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ರೈತರ ಪರವಾಗಿ ಬಜೆಟ್ ಮಂಡನೆ ಮಾಡಿಲ್ಲ. ರೈತ ಸಂಘಟನೆಗಳು ಹೋಗಿ ಹಲವಾರು ಬೇಡಿಕೆಗಳನ್ನ ಮನವಿ ಕೊಟ್ರು ಮುಖ್ಯಮಂತ್ರಿಗಳು ಬಜೆಟ್ ಲನಲ್ಲಿ ಸ್ಪಂದಿಸಿಲ್ಲ ಎಂದು ನಗರದ ಪ್ರೀಡಂ ಪಾಕ್೯ನಲ್ಲಿ
ವಿಭಿನ್ನ ನಾಟಕ ಮಾಡುವ ಮುಖಾಂತರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.
ರೈತರ ಪ್ರಮುಖ ಬೇಡಿಕೆ
– ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು
– ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ
– ಭತ್ತ, ರಾಗಿ, ಜೋಳ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿ
– ಕಿಂಟ್ವಾಲ್ಗೆ ಕನಿಷ್ಠ ₹500 ಹೆಚ್ಚಳ ಮಾಡಬೇಕು
– ಕಬ್ಬು ಬೆಳೆಗೆ ಪ್ರತಿ ಟನ್ಗೆ ₹4ಸಾವಿರ ನಿಗದಿ ಮಾಡಿ
– ಮಹದಾಯಿ ಯೋಜನೆ ಅನುಷ್ಠಾನ ಮಾಡಬೇಕು
– 60 ವರ್ಷದ ಮೇಲ್ಪಟ್ಟ ರೈತರಿಗೆ ಪಿಂಚಣಿ ಜಾರಿ ಮಾಡಿ
– ರೈತರಿಗೆ ಬ್ಯಾಂಕ್ ಅಧಿಕಾರಿಗಳು ಕಿರುಕುಳ
ಪ್ರತಿಭಟನೆಯಲ್ಲಿ ಕಿರು ನಾಟಕವನ್ನು ಸೇರಿಸಿ ರೈತರ ಕಷ್ಟವನ್ನು ನಾಟಕದ ಮೂಲಕ ತೋರಿಸಿದರು… ರೈತರ ಬೇಡಿಕೆಯನ್ನು ಈಡೇರಿಸಲು ಸರ್ಕಾರ ನಿರ್ಲಕ್ಷ್ಯ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾಗಿ ಹೋರಟ ಮಾಡಲು ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು..
ಒಟ್ನಲ್ಲಿ ನಮ್ಮ ಬೇಡಿಕೆಗಳು ಸರ್ಕಾರ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ರು