ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಾಲ ವಸೂಲಿ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿ ಜಿಲ್ಲೆಯ ವಿವಿಧ ಮೂಲೆಗಳಿಂದ ಬಂದಿರುವ ರೈತರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಈಗಾಗಲೇ ಬೃಹತ್ ಪ್ರಮಾಣದಲ್ಲಿ ಬರಗಾಲ ಆವರಿಸಿದೆ.
ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಿಸಿದೆ, ಆದರೆ ಈ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾತ್ರ ತಮ್ಮ ಧೋರಣೆಯನ್ನು ಬದಲಿಸಿಕೊಂಡಿಲ್ಲ, ಪ್ರಗತಿ ಗ್ರಾಮೀಣ ಬ್ಯಾಂಕ್ ಮಾತ್ರ ಇದ್ಯಾವುದನ್ನು ತಲೆಕೆಡಿಸಿಕೊಳ್ಳದೇ ಸಾಲ ವಸೂಲಿಗೆ ನಿಂತಿದೆ, ಬಾಕಿ ಇರುವ ಪ್ರತಿ ರೈತನಿಗೆ ನೋಟಿಸು ಕಳಿಸುವುದು, ಸಾಲ ಮರುಪಾವತಿ ಮಾಡದ್ದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳವುದಾಗಿ ಬೆದರಿಕೆ ಹಾಕುವ ಕಾರ್ಯ ನಡೆದಿದೆ.
ಬ್ಯಾಂಕ್ ಸಿಬ್ಬಂದಿ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ರೈತರಿಗೆ ಉಂಟು ಮಾಡುತ್ತಿದ್ದಾರೆ, ಈ ಎಲ್ಲಾ ಕಾರಣದಿಂದ ರೈತರು ಬೇಸತ್ತು ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡ್ಡಿದ್ದಾರೆ. ಎತ್ತಿನ ಗಾಡಿಯ ಮೂಲಕ ಬಂದು ತಾವು ಬೆಳೆದ ಹಲವಾರು ಬೆಳೆಗಳನ್ನು ಬ್ಯಾಂಕ್ ಮುಂದೆ ಹಾಕಿ, ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.