ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಾಲಾ ವಸೂಲಾತಿ ವಿರುದ್ದ ರೈತರು ಮುಗಿ ಬಿದ್ದಿದ್ದು ಸುಮಾರು 2 ವರ್ಷಗಳಿಂದ ಸಾಲಾ ವಸೂಲಾತಿ ನೀತಿಯನ್ನು ಅನುಸರಿಸುತ್ತಿದ್ದು ಹಾಗೆ ರೈತರನ್ನು ಶತೃಗಳ ರೀತಿ ನೋಡುತ್ತಿರುವುದರಿಂದ ರೈತರು ಅಸಮಾಧಾನದ ಭುಗಿಲೆದ್ದಿದ್ದಾರೆ. ಹೌದು.. ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ರೂತರ ಗೋಳು ಕೇಳೋರಿಲ್ಲದ ಹಾಗೆ ಆಗಿದೆ. ಕೃಷಿ ಸಾಲದ ಅಸಲಿನಲ್ಲಿ ಶೇ. 50 ರಷ್ಟು ಸಾಲದ ಮರುಪಾವರಿ ಅನುಮತಿ ಬೇಡಿಕೆ ಪರಿಗಣಿಸುವಂತೆ ರೈತರು ಮನವಿ ಮಾಡಿದ್ದಾರೆ.
ಈ ಗ್ರಾಮೀಣ ಬ್ಯಾಂಕ್ ವಿರುದ್ಧ ಹೋರಾಟ ನಡೆಸಲು ಇದೇ ತಿಂಗಳು 28ನೇ ತಾರೀಕಿನಂದು ಹೋರಾಟ ನಡೆಸಲು ರೈತರು ಮುಂದಾಗಿದ್ದು ಈ ಗ್ರಾಮೀಣ ಬ್ಯಾಂಕ್ ವಿರುದ್ಧ ಕ್ರಮ ತೆಗದುಕೊಳ್ಳಲು ಮನವಿ ಮಾಡಲಾಗಿದೆ. ಆದರೆ ಇದರ ಬಗ್ಗೆ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ತುಟಿಕ್ ಪಿಟಿಕ್ ಅಂದಿಲ್ಲ ಆದರೆ ರೈತರು ಮಾತ್ರ ರೊಚ್ಚಿಗೆದ್ದಿದ್ದು ಎಲ್ಲರು ಪ್ರತಿಭಟನೆಗೆ ಬರಲೇಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆರು ಮಾದವ ರೆಡ್ಡಿ ಕರೂರು ರಾಜ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ಲೇಪಕ್ಷಿ ಅಸುಂಡಿ ಜಿಲ್ಲಾ ಕಾರ್ಯದರ್ಶಿ ಬಳ್ಳಾರಿ ಕಲ್ಕಂಬ ಪಂಪಾಪತಿ ಕುರುಗೋಡು ತಾಲೂಕು ಅಧ್ಯಕ್ಷರು . ಕೆ ಬಸವ ರೆಡ್ಡಿ ಜಿಲ್ಲಾ ಸಮಿತಿ ಸದಸ್ಯರು. ಬಿ ಸುರೇಂದ್ರ ಕುರುಗೋಡು ತಾಲೂಕು ಕಾರ್ಯದರ್ಶಿ. ಕಿರಣ್ ಕುಮಾರ್ ಬಳ್ಳಾರಿ ತಾಲೂಕು ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಎಲ್ಲಾ ಸದಸ್ಯರು ಈ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು