ಶಿಡ್ಲಘಟ್ಟ : ನಗರದ ಪ್ರಥಮ ಧರ್ಜೆ ಕಾಲೇಜಿನಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಬೇರೆಡೆ ವರ್ಗಾವಣೆಗೊಂಡಿರುವ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಇಂದು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಧ್ಯಾಪಕರಾದ ಶಫಿವುಲ್ಲಾ, ವೆಂಕಟೇಶ್ ಪ್ರಾಂಶುಪಾಲರಾದ ನಂತರ ಕಾಲೇಜಿನ ಅಭಿವೃದ್ಧಿ ಮಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಇವರ ಅವಧಿಯಲ್ಲಿ ಸುಮಾರು ಮೂರು ಕೋಟಿ ಯಷ್ಟು ಅನುದಾನ ತರಲು ಕಾರಣಕರ್ತರಾಗಿದ್ದಾರೆ, ಎಂದರು.
ಕಾಲೇಜಿಗೆ ತನ್ನ ಆದ ಇತಿಹಾಸವಿದ್ದು ಬಡ ವಿದ್ಯಾರ್ಥಿಗಳಿಗೆ ಸದಾ ಸೇವೆ ನೀಡಲು ನಾವೆಲ್ಲ ಸಿದ್ದರಿದ್ದೇವೆ ಎಂದರು.
ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿ, ಈ ಕಾಲೇಜಿನಲ್ಲಿ ಹತ್ತು ವರ್ಷಗಳ ಸೇವೆ ನನಗೆ ಅತ್ಯಂತ ತೃಪ್ತಿ ತಂದುಕೊಟ್ಟಿದೆ. ನನ್ನ ಆಸೆಯಂತೆ ಕಾಲೇಜಿನಲ್ಲಿ ಒಂದು ಉತ್ತಮ ವಾತಾವರಣವನ್ನು ಸೃಷ್ಟಿ ಮಾಡಿದ್ದೇವೆ. ಈ ಅವಧಿಯಲ್ಲಿ ಎಲ್ಲಾ ಪ್ರಾಧ್ಯಾಪಕರು ಉತ್ತಮ ಸಹಕಾರವನ್ನು ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ ಜಯಂತಿ ಗ್ರಾಮ ನಾರಾಯಣಸ್ವಾಮಿ ಮಾತನಾಡಿ ಹಂತ ಹಂತವಾಗಿ ಪ್ರಾಂಶುಪಾಲರು ಅಭಿವೃದ್ಧಿಯನ್ನು ಮಾಡುವ ಮೂಲಕ ಈಗ ಮಾದರಿ ಕಾಲೇಜನ್ನಾಗಿ ಮಾಡಿದ್ದಾರೆ. ಕೇವಲ ಪಠ್ಯ ವಿಷಯಗಳಲ್ಲದೇ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ವಿದ್ಯಾರ್ಥಿಗ ಸರ್ವತೋಮುಖ ಅಭಿವೃದ್ಧಿಗೆ ಕಾರಣಾಗಿದ್ದಾರೆ ಎಂದು ತಿಳಿಸಿದರು.
ವರ್ಗಾವಣೆಗೊಂಡ ಡಾ. ವಿ. ವೆಂಕಟೇಶ್, ಪ್ರಾಧ್ಯಾಪಕರಾದ ಉಮೇಶ್ ರೆಡ್ಡಿ, ನರಸಿಂಹಮೂರ್ತಿ,ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಆದಿ ನಾರಾಯಣಪ್ಪ, ಶಿವಶಂಕರಿ, ಮುರಳಿ ಆನಂದ್, ವಿಜಯೇಂದ್ರ ಜಿ. ಎಲ್, ರವಿಕುಮಾರ್.ಬಿ, ವೆಂಕಟೇಶ್ಕುಮಾರ್ . ಜಿ. ಬಿ, ಸುನೀತಾ, ಪ್ರತಿಮಾ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.