ಹುಬ್ಬಳ್ಳಿ:- ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಂದು ಸಂಜೆ ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ.
ಎಲ್ಲೆಡೆ ಹೊಸ ತೊಡಕು ಸಂಭ್ರಮ: ಗುಡ್ಡೆ ಮಾಂಸಕ್ಕೆ ಮುಗಿಬಿದ್ದ ದೇವನಹಳ್ಳಿ ಜನತೆ!
ಇಂದು ಸಂಜೆ 4 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದ್ದು, ನೆಹರು ಮೈದಾನದಿಂದ ಶ್ರೀ ಮೂರುಸಾವಿರ ಮಠದ ವರೆಗೆ ಶ್ರೀ ಗಳ ಅದ್ದೂರಿ ಮೆರವಣಿಗೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನೇರವಾಗಿ ಸೆಡ್ಡು ಹೊಡೆದಿದ್ದಾರೆ.
ಲಿಂಗಾಯತ, ಕುರುಬ, ವಾಲ್ಮೀಕಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದು, ಪ್ರಲ್ಹಾದ್ ಜೋಶಿ ಸ್ವಜನ ಪಕ್ಷಪಾತ ಮಾಡಾತಾ ಇದ್ದಾರೆ. ತಾವು ಬಿಟ್ಟು ಬೇರೆಯವರನ್ನ ಬೆಳಯಲಿಕ್ಕೆ ಬಿಡತಾ ಇಲ್ಲ ಎಂಗು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು.
ಹೀಗಾಗಿ ಇಂದು ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಹಿಂಬಾಲಕರು, ಹಿತೈಷಿಗಳಿಂದ ಮುಂದಿನ ತಯಾರಿ ಕುರಿತು ಗೌಪ್ಯ ಸಭೆ ನಡೆಸಲಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)