ಬೆಂಗಳೂರು:- ಲಾಂಗ್ನಿಂದ ಬೆದರಿಸಿ ಸುಲಿಗೆ ಮಾಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಮ್ರಾನ್, ಅರ್ಪಿತ ಅಹಮದ್, ಮೋಹಿತ್ ಅಲಿಯಾಸ್ ಮೋಹನ್ ಮತ್ತು ಸೈಯದ್ ಮಾಜಾ ಬಂಧಿತ ಸುಲಿಗೆಕೋರರು ಎಂದು ಹೇಳಲಾಗಿದೆ.
ಆರೋಪಿ ಇಮ್ರಾನ್ ವಿರುದ್ಧ 30 ಪ್ರಕರಣಗಳು ದಾಖಲಾದರೆ ಮತ್ತೊಬ್ಬ ಆರೋಪಿ ಅರ್ಪಿತ್ ಅಹಮದ್ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ. ನ.21ರಂದು ರಾತ್ರಿ 11.55ರ ಸುಮಾರಿನಲ್ಲಿ ನಾಲ್ಕು ಮಂದಿಯ ಗುಂಪೆಪೊಂದು ಆರ್ಟಿನಗರದ ಬಾರ್ ಅಂಡ್ ರೆಸ್ಟೋರೆಂಟ್ಗೆ ನುಗ್ಗಿ ಲಾಂಗ್ನಿಂದ ಬೆದರಿಸಿ ಕ್ಯಾಶ್ ಕೌಂಟರ್ನಲ್ಲಿದ್ದ 40 ಸಾವಿರ ಹಣ ಸುಲಿಗೆ ಮಾಡಿತ್ತು.
ಅಲ್ಲದೆ ಈ ಗುಂಪು ಡಿಜೆ ಹಳ್ಳಿ ಪೆಪೊಲೀಸ್ ಠಾಣಾ ವ್ಯಾಪ್ತಿಯ ಚಹಾ ಅಂಗಡಿ ಮಾಲೀಕ ಬಾಗಿಲು ಹಾಕುತ್ತಿದ್ದಾಗ ಚಹಾ ಮಾಡಿಕೊಡುವಂತೆ ಲಾಂಗ್ನಿಂದ ಬೆದರಿಸಿದೆ. ಚಹಾ ಮಾಡಲು ಒಪ್ಪದಿದ್ದಾಗ ಮಾಲೀಕನ ಬಳಿಯಿದ್ದ ಹಣ ಸುಲಿಗೆ ಮಾಡಿ ಈ ಗುಂಪು ಪರಾರಿಯಾಗಿತ್ತು. ಈ ಬಗ್ಗೆ ಆರ್ಟಿನಗರ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದವು.
ಈ ಪ್ರಕರಣದ ತನಿಖೆ ಕೈಗೊಂಡ ಆರ್ಟಿ ನಗರ ಠಾಣೆ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿದ್ದ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯವೆಸಗಿದ ವ್ಯಕ್ತಿಯ ಚಹರೆ ಪಡೆದುಕೊಂಡು, ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಿ 4 ದ್ವಿಚಕ್ರ ವಾಹನಗಳು ಮತ್ತು 12,500 ನಗದು ವಶಪಡಿಸಿಕೊಂಡಿದ್ದಾರೆ.