ತುಮಕೂರು:- ತುಮಕೂರು ಜಿಲ್ಲಾ ಕೇಸರಿ ಮನೆಯ ಸ್ಫೋಟಕ ಸುದ್ದಿ ಹೊರ ಬಿದ್ದಿದೆ. ಜಿಲ್ಲಾ ಬಿಜೆಪಿ ನಾಯಕರು FB ಓಪನ್ ಮಾಡಲು ನಡುಕ ಹುಟ್ಟುಹಾಕುವಂತೆ ಮಾಡಿರುವ ಫೇಸ್ ಬುಕ್ ಖಾತೆ ಇದೀಗ ಬಿಜೆಪಿಗರಿಗೆ ನಡುಕ ಹುಟ್ಟಿಸಿದೆ.
ತುಮಕೂರು ಬಿಜೆಪಿಗರ ಅನಾಮಧೆಯ ಅರುಣ ತಲೆಗೆ ಹುಳ ಬಿಟ್ಟಿದ್ದಾನೆ. ಫೇಸ್ ಬುಕ್ ನಲ್ಲಿ ಅರುಣಾ ಅಂತಾ ಬ್ರೌಸ್ ಮಾಡುದ್ರೆ ಸಾಕು ಅನಾಮಧೇಯ ಅರುಣ ಫೇಜ್ ಪ್ರತ್ಯಕ್ಷವಾಗುತ್ತಿದೆ. ಅನಾಮಧೇಯ ಅರುಣ ಎಂಬ ಫೇಸ್ ಬುಕ್ ಅಕೌಂಟ್ ಮೂಲಕ ಜಿಲ್ಲಾ ಬಿಜೆಪಿ ನಾಯಕರ ಬಂಡವಾಳ ಬಯಲಾಗಿದೆ. ಜಿಲ್ಲಾ ಬಿಜೆಪಿ ತೆರೆ ಮರೆಯ ಕಚ್ಚಾಟ ಅನಾವರಣಗೊಂಡಿದೆ.
ಬಿಜೆಪಿ ತುದಿಗಾಲಿನಲ್ಲಿ ಅನಾಮಧೇಯ ಅರುಣ ನಿಲ್ಲುವಂತೆ ಮಾಡಿದ್ದು, ಜಿಲ್ಲಾ ರಾಜಕೀಯ ವಲಯದಲ್ಲಿ ಅನಾಮಧೇಯ ಅರುಣಾ ಕಾವೇರಿಸಿದೆ. ಇವತ್ತು ಯಾರ ಬಗ್ಗೆ ಪೋಸ್ಟ್ ಮಾಡ್ತಾನೆ ಅನ್ನೋದೆ ಚರ್ಚೆ ನಡೆದಿದೆ. ಚುನಾವಣೆ ಅಕ್ರಮ, ಹಣ ಲೂಟಿ, ಬಿಜೆಪಿ ಬಂಡಾಯದ ಜಗತ್ಜಾಹೀರಾತಾಗಿದೆ. ಹಣಬಾಕ, ಚಿನ್ನಿಮರಿ ದುರ್ಗದ ವೀನ, ಭೀಮನಸಂದ್ರದ ಕೇತು, ಭಾಸ್ಕರ, ವಿಕಸಿತ ಡಾಬಾ ಕುಳ್ಳ..ಉಪನಾಮದ ಹೆಸರಿನಲ್ಲಿ ಬಿಜೆಪಿ ಜಿಲ್ಲಾ ನಾಯಕರ ಮೂದಲಿಕೆ ಮಾಡಲಾಗಿದೆ. ಬಿಜೆಪಿ ನಾಯಕರ ಉಪನಾಮಗಳನ್ನು ಹಾಕಿ ಅಕೌಂಟ್ ನಿಜಕ್ಕೂ ಬಿಜೆಪಿಗರಿಗೆ ನಿದ್ದೆಗಡೆಸಿದೆ. ಚಿಕ್ಕನಳ್ಳಿ ಮಾತಿನಸ್ವಾಮಿಗೆ ಭಾಸ್ಕರ್ ಟಕ್ಕರ್ ಕೊಟ್ಟಿದ್ದು, ಅನಾಮಧೇಯ ಅರುಣ ಯಾರು..?ಅನಾಮಧೇಯನ ಅಡ್ರೆಸ್ ಹುಡುಕಾಟದಲ್ಲಿ ನಾಯಕರ ಹರಸಾಹಸಪಡಿತ್ತಿದ್ದಾರೆ. ಜಿಲ್ಲಾ ಬಿಜೆಪಿ ಒಡಕು ಹಾಗೂ ಒಳ ಜಗಳದ ಬಗ್ಗೆ ಅನಾಮಧೇಯ ಅರುಣ ಎಂಬ F Bಖಾತೆ ಮೂಲಕ ಅನಾವರಣ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಮಾಡಿರುವ ಹಗರಣಗಳ ಬಗ್ಗೆ ಚರ್ಚೆ ಹುಟ್ಟುಹಾಕುವಂತೆ ಖಾತೆ ಮಾಡಿದೆ. ಸೋಷಿಯಲ್ ಮೀಡಿಯಾ ಕಳೆದ ವಿಧಾನಸಭಾ ಚುನಾವಣಾಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಪಾತ್ರದ ಸತ್ಯ ಬಿಚ್ಚಿಡುತ್ತಿದೆ. ಅನಾಮಧೇಯ ಅರುಣನ FB ಖಾತೆ ಅಕ್ರಮ ಆಸ್ತಿ ಗಳಿಗೆ, ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಪಿಕ್ ಟು ಪಿನ್ ಮಾಹಿತಿ ಕೊಡಿತ್ತಿದೆ . ಅನಾಮಧೇಯ ಅರುಣನಾ ಹುಡುಕಾಟದಲ್ಲಿ ಬಿಜೆಪಿ ನಾಯಕರು ಇದ್ದಾರ ಎಂಬ ಪ್ರಶ್ನೆ ಮೂಡಿದೆ ಐಪಿ ಅಡ್ರೆಸ್ ಸಿಗದಂತಾ ರೀತಿಯಲ್ಲಿ ಅಪರಿಚಿತ ಚಾಲಾಕಿ ಅಕೌಂಟ್ ನಿರ್ವಹಿಸುತ್ತಿದೆ. ಅನಾಮಧೇಯನನ್ನ ಕಂಡುಹಿಡಿಯಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿ ನಾಯಕರು ವಿಫಲಗೊಂಡಿದ್ದಾರೆ.