ಗದಗ: ಉತ್ತರ ಕರ್ನಾಟಕದ ಸ್ಪೆಶಲ್ ಮಿರ್ಚಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಿರ್ಚಿ ನೋಡಿದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರತ್ತೆ ಅಂತಹ ಮಿರ್ಚಿಗಳನ್ನ ಹೊಟೆಲ್ ಗಳಲ್ಲಿ ಒಂದೋ ಎರಡೋ ಸವಿತೇವೆ ಆದ್ರೆ ಪರಮಪೂಜ್ಯ ಗಾನಯೋಗಿ ಲಿಂ. ಪಂ. ಪಂಚಾಕ್ಷರ ಗವಾಯಿಗಳವರ 80 ನೇ ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಕ್ಕದಲ್ಲಿರೋ ಕೆ ಎಚ್ ಪಾಟೀಲ್ ಸಭಾಭವನದ ಆವರಣದಲ್ಲಿ ಜಾತ್ರೆಗೆ ಬಂದ ಸಹಸ್ರಾರು ಭಕ್ತರಿಗೆ ದಾಸೋಹದೊಂದಿಗೆ ಮಿರ್ಚಿ ಸವಿಯುವ ವ್ಯವಸ್ಥೆ ಮಾಡಲಾಗಿದೆ.
ಕೊಪ್ಪಳ : ಎಷ್ಟೇ ಹುಡುಕಿದರೂ ಸಿಗದ ಕನ್ಯೆ, ಬೇಸತ್ತು ಡಿಸಿ ಮೊರೆ ಹೋದ ಯುವ ರೈತ!
ಜಾತ್ರೆಗೆ ಬಂದಂತಹ ಸಹಸ್ರಾರು ಭಕ್ತಾದಿಗಳಿಗೆ ವಿಧ ವಿಧವಾದ ದಾಸೋಹ ವ್ಯವಸ್ಥೆಯನ್ನ ಮಾಡಲಾಗಿದೆ. ಬೂಂದಿ, ಸಿಹಿ ಖಾದ್ಯಗಳು, ಬದನೇಕಾಯಿ ಪಲ್ಯ, ಅನ್ನ ಸಾಂಬರ್ ನೊಂದಿಗೆ ಮಿರ್ಚಿಗಳನ್ನು ನೀಡಲಾಗ್ತಾ ಇದ್ದು ಗದಗ ಜಿಲ್ಲೆ ಸೇರಿದಂತೆ ಪಕ್ಕದ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯದ ಸಹಸ್ರಾರು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಊಟದೊಂದಿಗೆ ಮಿರ್ಚಿ ಸವಿಯೋ ಮೂಲಕ ಊಟದ ಸ್ವಾದವನ್ನ ಹೆಚ್ಚಿಸಿಕೊಂಡ್ರು.
ಇದು ಈ ಬಾರಿಯ ಸ್ಪೆಷಲ್ ಆಗಿದ್ದು ಸುಮಾರು 25 ರಿಂದ 30 ಸಾವಿರಬ ಮಿರ್ಚಿಗಳನ್ನು ಈ ಬಾರಿ ಮಾಡಲಾಗ್ತಾ ಇದೆ. ಮುಂದಿನ ವರ್ಷದಿಂದ ಲಕ್ಷಾಂತರ ಮಿರ್ಚಿ ಮಾಡೋ ಮೂಲಕ ಪುಟ್ಟಯ್ಯಜ್ಜನ ಜಾತ್ರೆಗೆ ಮಿರ್ಚಿ ಸೇವೆ ಮಾಡುತ್ತೇವೆ ಅಂತಾರೆ ಮಿರ್ಚಿ ಸೇವೆ ತಂಡದ ಸದಸ್ಯರು. ಸಂಗೀತ ಜಾತ್ರೆಯಲ್ಲಿ ಮಿರ್ಚಿ ಸವಿಯೋ ಮೂಲಕ ವ್ಯವಸ್ಥಿತ ದಾಸೋಹದ ಬಗ್ಗೆ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ರು.