ನವದೆಹಲಿ: ದೇಶದಲ್ಲಿ ಯಾವುದೇ ನಾಯಕನೂ ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಸ್ವಯಂ ಅಭಿವೃದ್ಧಿಯ ಹಂತದಲ್ಲಿ ಯಾವುದೇ ಮನುಷ್ಯ ತನ್ನಷ್ಟಕ್ಕೆ ತಾನು ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಹುದು.
ಆನಂತರ ದೇವರಾಗಲು ಅಥವಾ ಭಗವಂತನಾಗಲೂ ಪ್ರಯತ್ನಿಸಬಹುದು. ಕಟ್ಟಕಡೆಗೆ ತಾನೇ ಸ್ವಯಂಭು, ತಾನೇ ವಿಶ್ವರೂಪದ ಪ್ರತೀಕ ಎಂಬಂತಾಗಲು ಇನ್ನಿಲ್ಲದ ಕಸರತ್ತುಗಳನ್ನು ಮಾಡಬಹುದು. ಆದರೆ, ಮುಂದೇನಾಗುತ್ತದೆ ಎಂದು ಹೇಳಲಾಗದು’’ ಎಂದು ಹೇಳಿದ್ದಾರೆ.
ಬೆನ್ನು ನೋವು ಪ್ರಾಣ ಹಿಂಡುತ್ತಿದೆಯೇ..? ಇಲ್ಲಿದೆ ನೋಡಿ ಮುಕ್ತಿ ಹೊಂದಲು ಪರಿಹಾರ
ಮುಂದೆ ಯಾವಾಗ ಏನಾಗುತ್ತೆ ಅಂತ ಹೇಳೋಕ್ಕಾಗಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರಿಕೆಯಿಂದ ಜೀವನ ಮಾಡಬೇಕಾಗುತ್ತದೆ. ಆತ್ಮೋನ್ನತಿ ಹಾಗೂ ವ್ಯಕ್ತಿತ್ವ ವಿಕಸನ ಎಂಬುದು ನಿರಂತರವಾಗಿ ನಡೆಯುವಂಥ ಪ್ರಕ್ರಿಯೆ. ಅದರಲ್ಲಿ ತೊಡಗಿಸಿಕೊಳ್ಳುವುದೆಂದರೆ ಅದು ಅಭಿವೃದ್ಧಿಯಲ್ಲಿ ನಿರಂತರವಾಗಿ, ದಣಿವಾಗದ ರೀತಿಯಲ್ಲಿ ಮುಂದುವರೆಯುವುದು ಎಂದರ್ಥ’’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.