ಬೆಂಗಳೂರು: ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದೇವನಹಳ್ಳಿ ಪಟ್ಟಣದ ಬಿಜೆಪಿ ಕಾರ್ಯಕರ್ತ ನಾಗೇಶ್ ನಿವಾಸಕ್ಕೆ ಆಗಮಿಸಿ ಭಾರತಾಂಬೆ, ಪಂಡಿತ್ ದೀನ್ ದಯಾಳ್ ಭಾವಚಿತ್ರಕೆ ಪುಷ್ಪನಮನ ಸಲ್ಲಿಸಿ ಬಿಜೆಪಿ ಬಾವುಟ ಹಾರಿಸಿದರು. ತದನಂತರ ಮಾತನಾಡಿದ ಅರುಣ್ ಸಿಂಗ್, ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನದ ಶುಭಾಶಯಗಳನ್ನ ತಿಳಿಸುತ್ತೇನೆ.
ಭಾರತದ ಮೂಲಮಂತ್ರದ ಆಶಯ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿ ಮಾಡಲು ಬಿಜೆಪಿ ಕಾರ್ಯಕರ್ತರು ಸದಾ ಕೆಲಸ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಈ ಬಾರಿ ಭಾರೀ ಮತಗಳ ಅಂತರದಿAದ ಗೆಲವು ಸಾಧಿಸಲಿದ್ದಾರೆ. ದೆಹಲಿಯ ಸಂಸತ್ ನಲ್ಲಿ ಸುಧಾಕರ್ ಭಾಗಿಯಾಗಲಿದ್ದಾರೆ ಎಂದು ನನಗೆ ಅತೀವ ಆತ್ಮವಿಶ್ವಾಸವಿದೆ ಎಂದರು..
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ಇನ್ನೂ ಬಿಜೆಪಿ ಸುಳ್ಳಿನ ಪಕ್ಷ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಸೇರಿದಂತೆ ಡಿಕೆಶಿ ಮನೆಯಲ್ಲೂ ಕೇಳಿದ್ರೂ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತೆ ಆಗಲಿದ್ದಾರೆ ಅಂತ ಹೇಳ್ತಾರೆ. ಮಕ್ಕಳನ್ನ ಕೇಳಿದ್ರೂ ಮೋದಿ ಪ್ರಧಾನಿ ಆಗಲಿದ್ದಾರೆ ಅಂತ ಹೇಳ್ತಾರೆ. ಕರ್ನಾಟಕದ ಎಲ್ಲಾ ಸೀಟುಗಳನ್ನ ನಾವು ಗೆಲ್ಲಲಿದ್ದೇª ಯಾಕಂದ್ರೆ ಮೋದಿಯವರು ಬಡವರು ರೈತರ ಪರವಾಗಿ ಕೆಲಸ ಮಾಡಿದ್ದಾರೆ. ದೇಶದ ಗೌರವವನ್ನ ಇಡೀ ವಿಶ್ವದಲ್ಲೇ ಪಸರಿಸುವ ಹಾಗೆ ಮಾಡಿದ್ದಾರೆ ಎಂದರು.