ಬೆಂಗಳೂರು:- 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ JDS ಪಕ್ಷ ಮತ್ತೊಮ್ಮೆ ಬಲಿಷ್ಠ ಅನ್ನೊದು ಸಾಬೀತಾಗಿದೆ ಎಂದು ಪರಿಷತ್ ಸದಸ್ಯ TA ಶರವಣ ಹೇಳಿದ್ದಾರೆ
Election Results: ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್..!
ಕರ್ನಾಟಕದಲ್ಲಿ ಮೈತ್ರಿ ಅಭ್ಯರ್ಥಿಗಳ ಭರ್ಜರಿ ಗೆಲುವು ವಿಚಾರವಾಗಿ ಮಾತನಾಡಿದ TA ಶರವಣ ಅವರು, ಈ ಚುನಾವಣೆ ಫಲಿತಾಂಶ ಜೆಡಿಎಸ್ ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ,
ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ದೇಶದ ಜನ ಆಯ್ಕೆ ಮಾಡಿದ್ದಾರೆ, ಸತತ ಮೂರನೇ ಬಾರಿಗೆ ಎನ್.ಡಿ. ಎ. ಗೆಲುವಿನ ಮೂಲಕ ಹೊಸ ದಾಖಲೆ ಮಾಡಿದ್ದು, ಬಿಜೆಪಿ, ಜೆಡಿಎಸ್ ಮೈತ್ರಿ ಯನ್ನು ರಾಜ್ಯದ ಜನ ಅಧಿಕೃತ ಮುದ್ರೆ ಒತ್ತಿದ್ದಾರೆ ಎಂದರು.
ಇನ್ನೂ ಈ ಮೈತ್ರಿ ಒಂದು ಪ್ರಬಲ ರಾಜಕೀಯ ಶಕ್ತಿ ಎನ್ನುವುದು ಸಾಬೀತಾಗಿದೆ. ವಿಶೇಷವಾಗಿ ಇಡೀ ಹಳೆ ಮೈಸೂರಲ್ಲಿ ದೇವೇಗೌಡ, ಕುಮಾರಸ್ವಾಮಿ ಅವರು ಮತ್ತೊಮ್ಮೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದರ ಮೂಲಕ ಬಲಿಷ್ಠ ಪಕ್ಷ ಆಗುತ್ತೆ, Jds ಪಕ್ಷವನ್ನು ಮುಗಿಸುವ ಸಂಚು ವಿಫಲ ಆಗಿದೆ. ಇನ್ನೂ ಜೆಡಿಎಸ್ ಎರಡು ಸ್ಥಾನ ಅಧಿಕೃತ ವಾಗಿ ಗೆದ್ದಿರಬಹುದು. ಆದರೆ ಸುಮಾರು 9ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲು ಜೆಡಿಎಸ್ ಸಹಕಾರ ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲಿ ಜೆಡಿಎಸ್ ಪ್ರಬಲ ಶಕ್ತಿ, ಇನ್ನು ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರಶ್ನಾತೀತ ನಾಯಕರಾಗಿ ಹೊರ ಹೊಮ್ಮಿದ್ದಾರೆ,
ಕುಮಾರಸ್ವಾಮಿ , ದೇವೇಗೌಡರನ್ನು ಮುಗಿಸುವ ಸಂಚುಗೆಳನ್ನು ರಾಜ್ಯದ ಜನ ವಿಫಲ ಆಗಿದ್ದಾರೆ. ರಾಷ್ಟ್ರ ರಾಜಕಾರಣ ಕೂಡ ಮತ್ತೊಮ್ಮೆ ಎನ್.ಡಿ. ಎ ಅಧಿಕಾರಕ್ಕೆ ಬರುವ ಮೂಲಕ ಹಲವು ಯೋಜನೆಗಳು ಜೀವ ತಲೆಯಲಿವೆ, ಕರ್ನಾಟಕ ಸರಕಾರ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಲು ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡರೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಲು ಆಗಿಲ್ಲ, ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ, ವೋಟ್ ಬ್ಯಾಂಕ್ ಸೃಷ್ಟಿಸುವಲ್ಲಿ ಗ್ಯಾರಂಟಿ ಯೋಜನೆ ವಿಫಲವಾಗಿವೆ ಎಂದು ಶರವಣ ಹೇಳಿದ್ದಾರೆ.