ಬೆಂಗಳೂರು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್, ಅಕ್ಕಮಹಾದೇವಿ ಸಭಾಂಗಣದಲ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ರಾಜು ಎಮ್ಮಿಗನೂರವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಭಾವಗೀತೆಗಳ ಬಿಡುಗಡೆ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ಜರುಗಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ್ ಅವರು ಏಕೆ ಕಾಡುತಿರುವೆ ಹಾಗೂ ನೂರು ಕಷ್ಟ ಬಂದರೇನು ಎಂಬ ಗೀತೆಗಳನ್ನು ಬಿಡುಗಡೆಗೊಳಿಸಿದರು. ಇದೆ ವೇಳೆ ಎಂ.ವಿ.ಷಡಕ್ಷರಿ ಕವಿಗಳ ಶೃಂಗಾರ ಪುಸ್ತಕ ಬಿಡುಗಡೆ ಮಾಡಿ ಶೃಂಗಾರ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ದೀಪಾವಳಿಗೆ ಡಬಲ್ ಧಮಾಕಾ ಆಫರ್ ಘೋಷಣೆ
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯ ನೇತ್ರಾ ತಜ್ಞರಾದ ಡಾ. ದಿನೇಶ್ ಕುಮಾರ್, ಖ್ಯಾತ ತಬಲವಾದಕರಾದ ಪಂಡಿತ್ ಸತೀಶ್ ಹಂಪಿಹೊಳಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾದ ಮೃತ್ಯುಂಜಯ ದೊಡ್ಡವಾಡ, ಗಝಲ್ ಕವಿ ಡಾ.ಶ್ರೀಶೈಲ ಮಾದಣ್ಣನವರ್, ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ರವೀಂದ್ರ ಸೊರಗಾವಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮಹದೇವ ಬಸರಕೋಡ, ಸೇರಿ ಅನೇಕರಿದ್ದರು.