ಬೇಸಿಗೆಯಲ್ಲಿ ನಾವು ನಮ್ಮ ಆಹಾರಕ್ರಮದಲ್ಲಿ ಬದಲಾಣೆ ಮಾಡಬೇಕು, ದೇಹದಲ್ಲಿ ನೀರಿನಂಶ ಕಾಪಾಡುವ ಹಾಗೂ ದೇಹವನ್ನು ತಂಪಾಗಿಡುವ ಆಹಾರಗಳ ಕಡೆಗೆ ಹೆಚ್ಚಿ ಒತ್ತು ಕೊಡಬೇಕು.
1. ಜೀರಿಗೆ
![Demo](https://ainlivenews.com/wp-content/uploads/2023/12/spoorthi-1.jpg)
ಇದು ದೇಹವನ್ನು ತಂಪಾಗಿ ಇಡುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಅಡುಗೆಯಲ್ಲಿ ತಪ್ಪದೆ ಬಳಸಿ. ಇದು ದೇಹದಲ್ಲಿ ಉಷ್ಣಾಂಶ ಕಡಿಮೆ ಮಾಡುತ್ತದೆ, ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ಆಯಂಟಿಆಕ್ಸಿಡೆಂಟ್ ಅಧಿಕವಿರುತ್ತದೆ, ಆದ್ದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಹೊಟ್ಟೆಉಬ್ಬುವುದು, ಹಿಟ್ಟೆಯ ಸೆಳೆತ ಈ ರೀತಿ ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುವುದು. 1 ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯಿರಿ.
2. ಚಿಯಾ ಬೀಜ
ಚಿಯಾ ಬೀಜ ಕೂಡ ಬೇಸಿಗೆಗೆ ತುಂಬಾನೇ ಒಳ್ಳೆಯದು, ಇದರಲ್ಲಿ ನಾರಿನಂಶವಿದೆ ಅಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ದೇಹದಲ್ಲಿ ನೀರಿನಂಶ ಕಾಪಾಡಲು ಕೂಡ ಚಿಯಾ ಬೀಜ ಸಹಕಾರಿ. ಅಲ್ಲದೆ ಈ ಬೀಜದಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಬೇಸಿಗೆಯಲ್ಲಿ ತುಂಬಾ ಒಳ್ಳೆಯದು, ಇದನ್ನು ಜ್ಯೂಸ್ನಲ್ಲಿ ಹಾಕಿ ಕುಡಿಯಿರಿ ದೇಹ ತಂಪಾಗಿರುತ್ತದೆ.
3. ಅಗಸೆ ಬೀಜ(Flax Seeds)
ಇದು ಕೂಡ ತುಂಬಾನೇ ಒಳ್ಳೆಯದು, ಅದರಲ್ಲೂ ಸಸ್ಯಾಹಾರಿಗಳು ಇದನ್ನು ತಪ್ಪದೆ ಬಳಸಿ, ಇದರಿಂದ ಒಮೆಗಾ 3 ಕೊಬ್ಬಿನಂಶದ ಕೊರತೆ ಉಂಟಾಗುವುದಿಲ್ಲ, ಇದು ಕೂದಲಿನ ಹಾಗೂ ತ್ವಚೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರ ಜೊತೆಗೆ ಇದರಲ್ಲಿ ನಾರಿನಂಶ ಅಧಿಕವಿದೆ, ಆದ್ದರಿಂದ ಜೀರ್ಣಕ್ರಿಯೆಗೂ ಸಹಕಾರಿ. ಅಲ್ಲದೆ ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು.
4. ಸೋಂಪು
ಸೋಂಪು ಕೂಡ ದೇಹವನ್ನು ತಂಪಾಗಿಡಲು ಸಹಕಾರಿ. ಊಟವಾದ ಬಳಿಕ ಸ್ವಲ್ಪ ಸೋಂಪು ಬಾಯಿಗೆ ಹಾಕಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಲ್ಲದೆ ದೇಹವನ್ನು ತಂಪಾಗಿಡುವುದು, ಇದನ್ನು ಕೂಡ ನೀರಿಗೆ ಹಾಕಿ ಕುದಿಸಿಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
5. ಗಸೆಗಸೆ
ಗಸೆಗಸೆ ಬೇಸಿಗೆಯಲ್ಲಿ ಸೇವಿಸಿದರೆ ತುಂಬಾನೇ ಒಳ್ಳೆಯದು, ಇದು ದೇಹದಲ್ಲಿರುವ ಅತ್ಯಧಿಕ ಉಷ್ಣಾಂಶವನ್ನು ಹೊರಹಾಕುವುದರಿಂದ ಇದನ್ನು ಆಯುರ್ವೇದ ಹಾಗೂ ಮನೆಮದ್ದಿನಲ್ಲಿ ಬಳಸಲಾಗುವುದು. ಗಸೆಗಸೆಯಲ್ಲಿ ಆಲ್ಕೋಲೈಡ್ಸ್ ಇರುವುದರಿಂದ ದೇಹದಲ್ಲಿರುವ ಅತ್ಯಧಿಕ ಉಷ್ಣಾಂಶವನ್ನು ಹೊರಹಾಕುತ್ತದೆ, ಅಲ್ಲದೆ ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಇದೆ. ಇದನ್ನು ನೀವೂ ಸ್ಮೂತಿ, ಸಲಾಡ್, ಡೆಸರ್ಟ್ನಲ್ಲಿ ಹಾಕಿ ಬಳಸಬಹುದು.
6. ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಕೊತ್ತಂಬರಿ ಬೀಜವನ್ನು ಬೆಲ್ಲ ಹಾಕಿ ಕಾಯಿಸಿ ಕುಡಿದರೆ ತುಂಬಾನೇ ಚೆನ್ನಾಗಿರುತ್ತದೆ. ಇದು ದೇಹದಲ್ಲಿರುವ ಉಷ್ಣಾಂಶ ಕಡಿಮೆ ಮಾಡುತ್ತದೆ, ಇದನ್ನು ಕೂಡ ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಿ.
7. ಮೆಂತೆಬೀಜ
ಮೆಂತೆ ಬೀಜ ಕೂಡ ದೇಹವನ್ನು ತಂಪಾಗಿಸುತ್ತದೆ ಅಲ್ಲದೆ ಅದರಲ್ಲಿ ಅನೇಕ ಔಷಧೀಯ ಗುಣಗಳು ಇವೆ, ಇದನ್ನು ತುಂಬಾ ಉಷ್ಣಾಂಶ ಇರುವಾಗ ಬಳಸಿದರೆ ದೇಹಕ್ಕೆ ತುಂಬಾನೇ ಒಳ್ಳೆಯದು. ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಕುಡಿದರೆ ತುಂಬಾ ಒಳ್ಳೆಯದು, ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ. ಮೆಂತೆಯನ್ನು ಅಡುಗೆಗೆ ಬಳಸಿ, ಈ ಮೆಂತೆ ಬೀಜ ಸೇವಿಸುವುದರಿಂದ ಉಷ್ಣಾಂಶದಿಂದ ಹೊಟ್ಟೆನೋವು ಆದರೆ ಅದನ್ನು ಕಡಿಮೆ ಮಾಡಲು ಸಹಕಾರಿ, ಮೂತ್ರ ಸೋಂಕು ತಡೆಗಟ್ಟಲು ಸಹಕಾರಿ.
![](https://ainlivenews.com/wp-content/uploads/2024/01/Ad-Banner-copy-scaled.jpg)