ಹಾಸನ: 3 ಕ್ಷೇತ್ರಗಳ ಬೈ ಎಲೆಕ್ಷನ್ ಬರಾಟೆ ಜೋರಾಗಿ ಸಾಗ್ತಿದೆ. ಇದರ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಮಗ ಗೆಲ್ಲುವಂತೆ ಮಾಡು ಎಂದು ಕುಮಾರಸ್ವಾಮಿ ದಂಪತಿ ಹಾಸನದ ಹಾಸನಂಬೆ ಮತ್ತು ಸಿದ್ದೇಶ್ವರ ಸ್ವಾಮಿಯ ಮೊರೆ ಹೋಗಿದ್ದರು. ಈ ವೇಳೆ ಸಿದ್ದೇಶ್ವರ ಸ್ವಾಮೀಜಿಯ ಬಲಗಡೆಯಿಂದ ಹೂ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಅನಿತಾ ಅವರು ಕುಮಾರಸ್ವಾಮಿಗೆ ಇದನ್ನು ತಿಳಿಸಿದ್ದಾರೆ.
Cooking Oil: ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಆಗುವ ತೊಂದರೆಗಳೇನು ಗೊತ್ತಾ..?
ದರ್ಶನದ ಬಳಿಕ ಮಾತನಾಡಿದ ಹೆಚ್ಡಿಕೆ, ಈ ಬಾರಿಯಾದರೂ ಮಗನಿಗೆ ಗೆಲುವು ಸಿಗಲಿ ಎಂದು ಪಾರ್ಥಿಸಿದ್ದೇನೆ ಎಂದರು. ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿರುವ ನಿಖಿಲ್ ಕುಮಾರಸ್ವಾಮಿ, ಮಾಕಳಿ, ನಾಗವಾರ, ದಶವಾರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ತೆರೆದ ವಾಹನದ ಮೂಲಕ ಕ್ಯಾಂಪೇನ್ ಮಾಡಿದರು. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.