ಕೊಪ್ಪಳ:- ರಾಜ್ಯದಲ್ಲಿ ಅವಧಿಗೂ ಮೊದಲೇ ಬೇಸಿಗೆ ಆರಂಭವಾಗಿದೆ. ಅದರಲ್ಲೂ ಬಿಸಿಲನಾಡು ಅಂತ ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಈಗಾಗಲೇ ನೆತ್ತಿ ಸುಡುತ್ತಿದೆ. ಇನ್ನು ಬೇಸಿಗೆ ಆರಂಭಕ್ಕೆ ಮುನ್ನವೇ ಕೊಳವೆ ಬಾವಿಗಳು ಬತ್ತಿಹೋಗಿವೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ಇದೀಗ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ, ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.
Ballari: ಶಾಸಕರ ಮನೆ ಸೇರಿ 4 ಕಡೆ ಬೆಳ್ಳಂಬೆಳಗ್ಗೆ ಇಡಿ ದಾಳಿ, ಪರಿಶೀಲನೆ!
ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕೃಷಿಗಾಗಿ ಕೊರೆಸಿದ್ದ ಕೊಳವೆಬಾವಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಿವೆ. ನಾಲ್ಕಾರು ಹೊಸ ಬೋರವೆಲ್ ಕೊರಿಸಿದ್ರು ಕೂಡಾ ಎಲ್ಲಿಯೂ ನೀರು ಬರ್ತಿಲ್ಲಾ. ಇದು ರೈತರ ಆತಂಕವನ್ನು ಹೆಚ್ಚಿಸಿದೆ. ಯಾಕಂದ್ರೆ ಅಡವಿಬಾವಿ ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ದ್ರಾಕ್ಷಿ ಬೆಳೆಯನ್ನು ಬೆಳೆದಿದ್ದಾರೆ.
ಬೆಂಗಳೂರಿಗರೇ ಇಲ್ಲಿ ಕೇಳಿ – ಇನ್ಮುಂದೆ 6 ವರ್ಷದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ!
ಇದೀಗ ದ್ರಾಕ್ಷಿ ಕಾಯಿಯಾಗಿದ್ದು, ಹಣ್ಣಾಗುವ ಹಂತದಲ್ಲಿದೆ. ಈ ಸಮಯದಲ್ಲಿ ದ್ರಾಕ್ಷಿಗೆ ಚೆನ್ನಾಗಿ ನೀರು ಬಿಟ್ಟರೆ, ಉತ್ತಮವಾದ ಫಸಲು ಬರುತ್ತದೆ. ಆದ್ರೆ ಇದೇ ಸಮಯದಲ್ಲಿ ಕೊಳವೆಬಾವಿಗಳು ಬತ್ತಿರುವುದರಿಂದ, ದ್ರಾಕ್ಷಿ ಬೆಳೆಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಿಕ್ಕಾಗದೇ ರೈತರು ಪರದಾಡುತ್ತಿದ್ದಾರೆ. ಕೆಲ ರೈತರ ದ್ರಾಕ್ಷಿ ತೋಟಗಳು ಬೆಳೆ ಬರುವ ಮುನ್ನವೇ ಒಣಗಿ ಹೋಗಿದ್ದರೆ, ಇನ್ನು ಕೆಲ ರೈತರ ತೋಟಗಳಲ್ಲಿನ ದ್ರಾಕ್ಷಿ ಸರಿಯಾಗಿ ಹಣ್ಣು ಆಗ್ತಿಲ್ಲಾ. ಹೀಗಾಗಿ ಇರೋ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ರೈತರು ಇದೀಗ ಪ್ರತಿನಿತ್ಯ ಮೂರರಿಂದ ನಾಲ್ಕು ಸಾವಿರ ಹಣವನ್ನು ಟ್ಯಾಂಕರ್ ನೀರಿಗಾಗಿ ಖರ್ಚು ಮಾಡುತ್ತಿದ್ದಾರೆ. ಏಳೆಂಟು ಕಿಲೋ ಮೀಟರ್ ದೂರದಿಂದ ಟ್ಯಾಂಕರ್ ಮೂಲಕ ನೀರನ್ನು ತರೆಸಿ, ತಮ್ಮ ಕೃಷಿ ಹೊಂಡಕ್ಕೆ ಡಂಪ್ ಮಾಡುತ್ತಿದ್ದು, ನಂತರ ಹನಿ ನೀರಾವರಿ ಮೂಲಕ ದ್ರಾಕ್ಷಿ ಬೆಳೆಗೆ ನೀರು ಬಿಡುತ್ತಿದ್ದಾರೆ. ಆದ್ರೂ ನೀರು ಸಾಲುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.