ವಿಜಯನಗರ:- ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವ’ಕ್ಕೆ ಚಾಲನೆ ನೀಡಿದ್ದಾರೆ. ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ನಗಾರಿ ಬಾರಿಸಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸಚಿವ ಶಿವರಾಜ್ ತಂಗಡಗಿ, ಸಚಿವ ಬಿ. ನಾಗೇಂದ್ರ, ಶಾಸಕರಾದ ಭರತ್ ರೆಡ್ಡಿ ಮತ್ತು ಎಂ.ಪಿ.ಲತಾ ಭಾಗಿ ಸಿಎಂಗೆ ಸಾಥ್ ನೀಡಿದರು.
ಹಂಪಿ ಉತ್ಸವ’ಕೆ ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ ಬಂದ ಕೂಡಲೇ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ನಮ್ಮನ್ನು ಟೀಕೆ ಮಾಡಿದವರು ಗ್ಯಾರಂಟಿಗಳನ್ನು ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇಂದು ರಾಜ್ಯದಲ್ಲಿ ಭೀಕರ ಬರಗಾಲವಿದೆ. 30 ಲಕ್ಷ ರೈತರಿಗೆ ತಲಾ 2,000 ರೂಪಾಯಿ ಪರಿಹಾರ ನೀಡಿದ್ದೇವೆ. ಗ್ಯಾರಂಟಿಗಳ ಜೊತೆಗೆ ಬರ ಪರಿಹಾರ ನೀಡಿದ್ದೇವೆ. ಗ್ಯಾರಂಟಿಗಳಿಂದ ಹಣ ಉಳಿಯುತ್ತಿದೆ, ಎಲ್ಲೆಡೆ ಓಡಾಡುತ್ತಿದ್ದಾರೆ. ಇದನ್ನು ವಿದೇಶಗಳಲ್ಲಿ ಯುನಿವರ್ಸಲ್ ಬೇಸಿಕ್ ಇನ್ಕಮ್ ಎಂದು ಕರೆಯುತ್ತಾರೆ. ನಾವು ಎಲ್ಲಾ ಜಾತಿ ಧರ್ಮಗಳಿಗೆ ಸಮಾನವಾಗಿ ಕೊಡುತ್ತಿದ್ದೇವೆ. ಇದರಿಂದ ಕರ್ನಾಟಕವೇ ಮಾದರಿಯಾಗಬೇಕು. ನಾವು ಇನ್ನೊಬ್ಬರನ್ನು ಫಾಲೋ ಮಾಡವುದಿಲ್ಲ. ನಾವೇ ಇನ್ನೊಬ್ಬರಿಗೆ ಮಾದರಿ ಆಗಬೇಕು. ನಾವು ಕರ್ನಾಟದಿಂದ ಸಾಕಷ್ಟು ತೆರೆಗೆ ಕಟ್ಟುತ್ತಿದ್ದೇವೆ. ಆದರೆ ಕಟ್ಟುವಷ್ಟು ತೆರೆಗೆ ಸಿಗುತ್ತಿಲ್ಲ ಎಂದಿದ್ದಾರೆ.
4 ಲಕ್ಷ ಕೋಟಿ ತೆರಿಗೆ ಕೊಡುತ್ತಿದ್ದೇವೆ ಆದರೆ ಕೇಂದ್ರದಿಂದ 50 ಸಾವಿರ ಕೋಟಿ ಬರುತ್ತಿದೆ. ಬರಗಾಲ ಬಂದರೆ ಕೇಂದ್ರದಿಂದ ಒಂದು ಪೈಸೆ ಬಂದಿಲ್ಲ. ಹಾಗಾಗಿ ಕರ್ನಾಟಕದಿಂದ ಫೆ. 7 ರಂದು ಪ್ರತಿಭಟನೆಯನ್ನು ದೆಹಲಿಯಲ್ಲಿ ಮಾಡುತ್ತೇವೆ. ನಮಗೆ ಬರಬೇಕಾದ ಹಣ ಬರುವುದಕ್ಕೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಹಂಪಿ ಉತ್ಸವದಿಂದ ವಿಜಯನಗರ ಸಮ್ರಾಜ್ಯದ ಗತವೈಭವನ್ನು ಮತ್ತೆ ಸಾರುತ್ತೇವೆ. ನಮ್ಮ ಸರ್ಕಾರ ನಿಮ್ಮ ಜೊತೆ ಇದೆ. ನಿಮ್ಮಆಶೀರ್ವಾದ ಸದಾ ಹೀಗೆ ಇರಲಿ. ವಿಜಯನಗರ ಶ್ರೀಕೃಷ್ಣದೇವರಾಯ ಕಾಲದಲ್ಲಿ ದಸರಾ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ನಾವು ಮೈಸೂರಿನಲ್ಲಿ ಆಚರಿಸುತ್ತಿದ್ದೇವೆ. ಹಂಪಿಯಲ್ಲಿ ನಡೆಯಬೇಕಾದ ದಸರಾ ಮೈಸೂರಲ್ಲಿ ಆಚರಿಸ್ತಿದ್ದೇವೆ. ಹಾಗಾಗಿ ಗತವೈಭವ ನೆನಪಿಸಲು ಹಂಪಿ ಉತ್ಸವ ಆಚರಿಸಲಾಗುತ್ತಿದೆ ಎಂದರು.