ಬಾಗಲಕೋಟ:- ಬಾಗಲಕೋಟ ಡಿಹೆಚ್ಒ ಗುದ್ದಾಟದಲ್ಲಿ ಡಾ.ಜಯಶ್ರೀ ಮೇಲುಗೈ ಸಾಧಿಸಿದೆ. ಡಿಹೆಚ್ಓ ಕಚೇರಿಯಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಬಾಗಲಕೋಟೆ ಡಿ ಹೆಚ್ಓ ನೇಮಕ ಆದೇಶ ಹಿಡಿದು ಜಯಶ್ರೀ ಎಮ್ಮಿ ಬಂದಿದ್ದಾರೆ.
ವಿಜಯಪುರ: ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ..!
ಹೈಕೋರ್ಟ್ ಆದೇಶ ಹಿಡಿದು ಡಾ.ಜಯಶ್ರೀ ಡಿಹೆಚ್ಒ ಕುರ್ಚಿ ಪಡೆದಿದ್ದಾರೆ. ಕಳೆದ ಸಪ್ಟೆಂಬರ್ನಿಂದ ಬಾಗಲಕೋಟೆ ಡಿಹೆಚ್ಒ ಹುದ್ದೆಯಲ್ಲಿ ಡಾ.ರಾಜಕುಮಾರ್ ಯರಗಲ್ ಇಂದ್ರು ಇದ್ದರು. ಇವರು ಸರ್ಕಾರದ ಲೆಟರ್ ಹಿಡಿದು ಜಯಶ್ರೀ ಎಮ್ಮಿ ಸ್ಥಾನ ಕಿತ್ತುಕೊಂಡಿದ್ದರು.
ಅಂದು ಡಿಹೆಚ್ಒ ಹುದ್ದೆಯಲ್ಲಿದ್ದ ಡಾ.ಜಯಶ್ರೀ ಕಣ್ಣೀರು ಹಾಕಿಸಿದ್ದರು. ಡಾ.ಯರಗಲ್ ಹಾಲಿ ಶಾಸಕ ಹೆಚ್.ವೈ ಮೇಟಿ ಅಳಿಯ ಎನ್ನಲಾಗಿದೆ. ಡಾ.ಎಮ್ಮಿ ನೇಮಕ ಮಾಡಿ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಮಂಜೂರ್ ಆದೇಶ ಹೊರಡಿಸಿದ್ದಾರೆ. ಹಾಲಿ ಡಿಹೆಚ್ಒ ಡಾ.ರಾಜಕುಮಾರ್ ಯರಗಲ್ ಜಿಲ್ಲಾ ಸಂತಾನೋತ್ಪತ್ತಿ & ಮಕ್ಕಳ ಆರೋಗ್ಯ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಜುಲೈ 31 ಕ್ಕೆ ಡಾ.ಜಯಶ್ರೀ ಎಮ್ಮಿ ನಿವೃತ್ತಿ ಆಗಲಿದ್ದಾರೆ.