ಬೆಂಗಳೂರು: ಬಿಬಿಎಂಪಿಯಿಂದ ಇಂದು ಶ್ವಾನಗಳ ಉತ್ಸವ ಆಯೋಜನೆ ಏರ್ಪಾಡಿಸಿದ್ದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಉತ್ಸವಕ್ಕೆ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ರಿಂದ ಚಾಲನೆ ನೀಡಿದರು.
Coexistence camp I on locality &#bitefreelocality ಯೋಜನೆ ಅಡಿ ಶ್ವಾನಗಳ ಉತ್ಸವ ನಡೆಯಲಿದ್ದು ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಕಡಿಮೆ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಹಾಗೆ ಸಹಬಾಳ್ವೆಯ ಚಾಂಪಿಯನ್ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.
ಪ್ರತಿ ವಾರ್ಡ್ ಗಳಲ್ಲೂ ಕಾರ್ಯಕ್ರಮ ಆಯೋಜನೆ ರೂಪುಗೊಂಡಿದ್ದು ಇದೇ ಮೊದಲ ಬಾರಿಗೆ ಬಿಬಿಎಂಪಿ ಶ್ವಾನಗಳು ಉತ್ಸವ ಕಾರ್ಯಕ್ರಮ ಆಯೋಜನೆ ಆಘಿದ್ದು ಈ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಬೀದಿ ನಾಯಿಗಳಿಗೆ ಅನ್ನಸಂತರ್ಪಣೆ ಕಾರ್ಯ ನಡೆದಿದ್ದು ಹಲವು ವಾರ್ಡ್ಗಳಲ್ಲಿ ನಾಯಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕಯ ಆಯೋಜನೆ ನಡೆಸಲಾಯಿತು.
ಪಾಲಿಕೆ ಕೇಂದ್ರ ಕಚೇರಿ, ಎನ್.ಆರ್ ಚೌಕ, ಹಡ್ನನ್ ವೃತ್ತ,ಹೂಡಿಯ ಸದಾಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ,ಗುಬ್ಬಲಾಲ ಮುಖ್ಯ ರಸ್ತೆ,ಕೋಣನಕುಂಟೆ, ಸುಬ್ರಹ್ಮಣ್ಯಪುರ, ವಸಂತಪುರಸೇರಿದಂತೆ ಆಯ್ದ ಸ್ಥಳಗಳಲ್ಲಿ ಅನ್ನ ಸಂತರ್ಪಣೆ ನಡೆಯಿತು.
ಇದೇ ವೇಳೆ ವಿಶೇಷ ಅಯುಕ್ತ ಸುರತ್ಕಲ್ ವಿಕಾಸ ಕಿಶೋರ್ ಮಾತನಾಡಿ, ನಾಯಿಗಳ ಕಡಿತ ಹಾಗೂ ದಾಳಿಯ ಭಯದಿಂದ ನಾಯಿಗಳ ಮೇಲೆ ನಕಾರಾತ್ಮಕ ಭಾವನೆ ಹೆಚ್ಚಾಗಿದೆ ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಾಗಿ ನಾಯಿಗಳ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ, ವಾರ್ಡ್ ಮಟ್ಟದಲ್ಲಿ ರೆಸ್ಟೋರೆಂಟ್ಗಳೊಂದಿಗೆ ಪೌರಕಾರ್ಮಿಕರ ಸಹಯೋಗದೊಂದಿಗೆ ಆಹಾರ ನೀಡುವ ಕಾರ್ಯವನ್ನು ಪ್ರಾರಂಭ ಆಗಿದೆ
ಹಾಗೆ ರೆಸ್ಟೋರೆಂಟ್ಗಳಲ್ಲಿ ಉಳಿದ ಆಹಾರವನ್ನು ಬೀದಿ ನಾಯಿಗಳಿಗೆ ಪೂರೈಕೆ ಆಗುತ್ತೆಪ್ರತಿದಿನ ಒಂದು ಬಾರಿ ಆಹಾರವನ್ನು ನೀಡುವ ಯೋಜನೆ ಇದಾಗಿದೆವಾರ್ಡ್ನಿಂದ ಸ್ವಯಂಸೇವಕರಾಗಿ ಪ್ರಾಣಿ ಪಾಲಕರ ನಿಯೋಜನೆ ಮಾಡಲಾಗಿದೆ ಎಂದು ವಿಶೇಷ ಅಯುಕ್ತ ಸುರತ್ಕಲ್ ವಿಕಾಸ ಕಿಶೋರ್ ಹೇಳಿದರು.