ಬಾಗಲಕೋಟ :- ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಹಣ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನಲೆ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಇದೊಂದು ಹೊಸ ಜಾಲ. ಈ ವರೆಗೂ ಪಿಕ್ ಪಾಕೇಟ್ ಮಾಡ್ತಿದ್ರು. ಮನೆ ಬಾಗಿಲು, ಕಿಟಕಿ ಹೊಡೆದು ಒಳಗೆ ಬಂದು ದುಡ್ಡು ದೋಚುವವರು ಇದ್ರು. ಈಗ ಬ್ಯಾಂಕ್ ಒಳಗೆ ಕಳ್ಳರು ನುಸುಳಿಕೊಂಡಿದ್ದಾರೆ. ಅವರಿಂದ ಬಹಳ ಗಂಭೀರ ಪರಿಣಾಮ ಆಗ್ತಿವೆ. ಸರ್ಕಾರಿ ಇಲಾಖೆ, ಅಧಿಕಾರಿಗಳು ಭಾರಿ ಎಚ್ಚರಿಕೆಯಿಂದ ಇರಬೇಕು. ನಮಗೆ ಯಾವಾಗ ಬೇಕು ಹಣ ಸಿಕ್ಕು ಬಿಡುತ್ತಿದೆ. ನಮ್ಮ ಹಣ ಸರಿದೂಗಿಸಲು ಇನ್ನೊಂದು ಇಲಾಖೆ ಹಣ ವರ್ಗಾವಣೆ ಮಾಡುತ್ತಾರೆ. ಇದೊಂದು ಅತ್ಯಂತ ಗಂಭೀರ ಆಗಿರುವ ಕಳುವು. ಈ ಬಗ್ಗೆ ನಾನು ವಿವರವಾಗಿ ಸಿಎಂ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿ ಚರ್ಚೆ ಮಾಡ್ತೇನೆ. ಈಗ ಬಾಗಲಕೋಟೆ ಜಿಲ್ಲೆಯ ವಿವಿಧ ಇಲಾಖೆ ಹಣ ವರ್ಗಾವಣೆ ಆಗಿರುವ ಬಗ್ಗೆ ಚರ್ಚೆ ಮಾಡುವೆ ಎಂದರು.
ಬಾತ್ರೂಮ್ ನಿಂದ ಡೈರೆಕ್ಟ್ ರಸ್ತೆಗಿಳಿದ ಯುವತಿ: ಈ ಕಣ್ಣಲ್ಲಿ ಇನ್ನೂ ಏನೇನ್ ನೋಡ್ಬೇಕೋ ಗುರು!
ಮುಡಾ ಬಿಜೆಪಿ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಅದು ರಾಜಕೀಯವಾಗಿ. ರಾಜಭವನವನ್ನ ದುರುಪಯೋಗ ಮಾಡಿಕೊಳ್ಳುವ ಕೆಲಸ ನಡೆದಿದೆ. ಗೌವರ್ನರ್ ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ…ಏನು ಕಾರಣ. ಒಂದೇ ದಿನ ಕಂಪ್ಲೇಂಟ್ ಮಾಡ್ತಾರೆ. ಒಂದೇ ದಿನ ಚೀಪ್ ಸೆಕ್ರೆಟರಿ ವರದಿ ಕೊಡ್ತಾರೆ. ಆದ್ರೆ ಅದೇ ಒಂದೇ ದಿನ ಶೋಕಾಸ್ ನೋಟಿಸ್ ನೀಡ್ತಾರೆ. ರಾಜಭವನ ದುರುಪಯೋಗ ಸನ್ನಿವೇಶ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಮುಡಾ ಅದೊಂದು ಅಂಗಸಂಸ್ಥೆ. ಮುಡಾ ಮಾಡಿದ್ರೆ ಅವರ ಮೇಲೆ ಕಂಪ್ಲೇಂಟ್ ರಜಿಸ್ಟರ್ ಇರಬೇಕು. ಜಮೀನು ಕಳೆದುಕೊಂಡವರಿಗೆ ಕೊಟ್ಟಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳನ್ನು ಹೊಣೆ ಮಾಡೋದೇನಿದೆ. ಇದು ಕೇವಲ ರಾಜಕೀಯಕ್ಕಾಗಿ ಮಾಡತಕ್ಕಂತಹ ಆಟ. ಸಿದ್ದರಾಮಯ್ಯನವರ ಸರ್ಕಾರ ಅಭದ್ರಗೊಳಿಸಲು ಹೊರಟಿದ್ದಾರೆ. ಅದು ಆಗಲ್ಲ, ಇದು ರಾಜಕೀಯವೇ ಹೊರತು ಮತ್ತೇನಿಲ್ಲ ಎಂದರು.