ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಪ್ರತಿ ಹಿಂದೂಗಳ ಮನೆಯಲ್ಲಿ ತುಳಸಿಗಿಡ ಇದ್ದೇ ಇರುತ್ತದೆ. ತುಳಸಿ ಗಿಡದಲ್ಲಿ ಸ್ವತಃ ಲಕ್ಷ್ಮೀ ನೆಲೆಸಿದ್ದಾಳೆ ಎಂದು ನಂಬಲಾಗಿದೆ.
ರನ್ಯಾ ಗೋಲ್ಡ್ ಕೇಸ್ ಗೆ ವೈಟ್ ಗೋಲ್ಡ್ ನಂಟು!? ಇಡಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್!
ತುಳಸಿ ಪೂಜೆ ಮಾಡುವಾಗ ಕೆಲವರು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮನೆಗೆ ಸಮಸ್ಯೆ ಉಂಟಾಗಬಹುದು. ತುಳಸಿಗೆ ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ಕೆಲವೊಂದು ವಸ್ತುಗಳು ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುವೆಂದು ಹೇಳಲಾಗುತ್ತದೆ. ಅಂತಹ ವಸ್ತುಗಳಲ್ಲಿ ಈ ಒಂದು ವಸ್ತುವನ್ನು ತುಳಸಿ ಗಿಡದಲ್ಲಿ ಇಡುವುದರಿಂದ ಶ್ರೀಮಂತಿಕೆ ಹುಡುಕಿಕೊಂಡು ನಾವಿದ್ದಲ್ಲಿಗೆ ಬರುತ್ತದೆ. ತುಳಸಿ ಗಿಡದ ಬಳಿ ಯಾವ ವಸ್ತುವನ್ನಿಟ್ಟರೆ ಶ್ರೀಮಂತಿಕೆ ಮತ್ತು ಅದೃಷ್ಟ ನಮ್ಮ ಮನೆಗೆ ಬರುತ್ತದೆ.?
1. ತುಳಸಿಯ ಬಳಿ ಕವಡೆ:
ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳಲ್ಲಿ ಕವಡೆಯೂ ಒಂದಾಗಿದೆ. ಮನೆಯಲ್ಲಿ ಕವಡೆಯನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎನ್ನುವ ನಂಬಿಕೆಯಿದೆ. ಕವಡೆಯನ್ನು ಲಕ್ಷ್ಮಿ ದೇವಿಯ ರೂಪ ಮಾತ್ರವಲ್ಲ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿಯೂ ನೋಡಲಾಗುತ್ತದೆ. ಇದು ಲಕ್ಷ್ಮಿ ದೇವಿಯೊಂದಿಗೆ ಸಂಬಂಧವನ್ನು ಹೊಂದಿರುವ ವಸ್ತುವಾಗಿದೆ. ತುಳಸಿ ಗಿಡದ ಬಳಿ ಕವಡೆಯನ್ನು ಇಡುವುದರಿಂದ ಅಲ್ಲಿ ಲಕ್ಷ್ಮಿ ದೇವಿಯು ತನ್ನ ಅನುಗ್ರಹವನ್ನು ಇಡುತ್ತಾಳೆ.
2. ಹಣದ ಸಮಸ್ಯೆ ಪರಿಹಾರವಾಗುವುದು:
ತುಳಸಿ ಗಿಡದ ಬಳಿ ಅಥವಾ ತುಳಸಿ ಕುಂಡದಲ್ಲಿ ಕವಡೆಯನ್ನು ಇಡುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಮನೆಗೆ ಸಂಪತ್ತು ಹುಡುಕಿಕೊಂಡು ಬರುತ್ತದೆ ಮತ್ತು ಮನೆಯಲ್ಲಿ ಸದಾಕಾಲ ಸಕಾರಾತ್ಮಕತೆ ಉಳಿಯುವಂತೆ ಮಾಡುತ್ತದೆ. ಇದು ಹಣಕಾಸಿನ ಸಮಸ್ಯೆಗಳಿಂದ ಜನರಿಗೆ ಪರಿಹಾರವನ್ನು ನೀಡಲು ತುಂಬಾನೇ ಸಹಕಾರಿಯಾಗಿದೆ.
3. ಹಳದಿ ಬಣ್ಣದ ಕವಡೆ:
ತುಳಸಿ ಗಿಡದ ಬಳಿ ನೀವು ಇಡುವುದಾದರೆ ಹಳದಿ ಬಣ್ಣದ ಕವಡೆಗಳನ್ನು ಇಡಬೇಕು. ತುಳಸಿ ಗಿಡದ ಬಳಿ ಈ ರೀತಿಯಾದ ಹಳದಿ ಬಣ್ಣದ ಕವಡೆಯನ್ನು ಇಡುವುದರಿಂದ ಲಕ್ಷ್ಮಿ ದೇವಿಯು ಶೀಘ್ರದಲ್ಲೇ ಆಕರ್ಷಿತಳಾಗುತ್ತಾಳೆ. ನಿಮ್ಮ ಮತ್ತು ನಿಮ್ಮ ಮನೆಯ ಮೇಲೆ ಲಕ್ಷ್ಮಿ ದೇವಿಯು ಆಕೆಯ ಆಶೀರ್ವಾದದ ಮಳೆಯುನ್ನೇ ಸುರಿಸುತ್ತಾಳೆ. ಇದು ನಿಮ್ಮ ಮನೆಗೆ ಸಂಪತ್ತು ಆಕರ್ಷಿತವಾಗುವಂತೆ ಮಾಡುತ್ತದೆ.
4. ಸಾಲದಿಂದ ಮುಕ್ತಿ:
ಕವಡೆಯನ್ನು ತುಳಸಿ ಗಿಡದ ಬಳಿ ಇಟ್ಟು ನಿಯಮಿತವಾಗಿ ತುಳಸಿಯೊಂದಿಗೆ ಕವಡೆಯನ್ನೂ ಪೂಜಿಸುವುದರಿಂದ ಅವನು ತನ್ನೆಲ್ಲಾ ಹಣಕಾಸಿನ ಸಮಸ್ಯೆಗಳಿಂದ ಮುಕ್ತನಾಗುವುದು ಮಾತ್ರವಲ್ಲ, ಅವನು ಸಾಲದ ಸಮಸ್ಯೆಯಿಂದಲೂ ಪರಿಹಾರವನ್ನು ಪಡೆದುಕೊಳ್ಳುತ್ತಾನೆ.
5. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ:
ಯಾವುದೇ ಒಬ್ಬ ವ್ಯಕ್ತಿ ತನ್ನ ವ್ಯಾಪಾರ, ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ, ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ತುಳಸಿ ಗಿಡದ ಬಳಿ ಕವಡೆಯನ್ನು ಪೂಜೆಯನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಅವನು ತನ್ನ ಪ್ರತಿಯೊಂದು ಕೆಲಸ – ಕಾರ್ಯಗಳಲ್ಲೂ ಯಶಸ್ಸನ್ನು ಸಾಧಿಸುತ್ತಾನೆ ಎನ್ನುವ ನಂಬಿಕೆಯಿದೆ.
ತುಳಸಿ ಗಿಡದ ಬಳಿ ಕವಡೆಯನ್ನು ಇಡುವುದಾದರೆ ಸಾಧ್ಯವಾದಷ್ಟು ಬಿಳಿ ಬಣ್ಣದ ಕವಡೆಯನ್ನಿಡಿ. ಈ ರೀತಿ ಬಿಳಿ ಬಣ್ಣದ ಕವಡೆಯನ್ನು ಇಡುವುದರಿಂದ ಹಣಕಾಸಿನ ಸಮಸ್ಯೆಗಳು ದೂರಾಗುವುದು ಮಾತ್ರವಲ್ಲ ಕೌಟುಂಬಿಕ ಸಮಸ್ಯೆಗಳಿಂದಲೂ ಇದು ನಮಗೆ ಪರಿಹಾರವನ್ನು ನೀಡುತ್ತದೆ.