ಸಂಜೆಯ ಸಮಯದಲ್ಲಿ ಉಪ್ಪನ್ನು ಇತರರಿಗೆ ನೀಡಿದರೆ ಲಕ್ಷ್ಮಿಯನ್ನೇ ಮನೆಯಿಂದ ಆಚೆ ಕಳಿಸಿದ ಹಾಗೆ ಆಗುವುದು. ಇದು ಲಕ್ಷ್ಮಿಗೆ ಅವಮಾನ ಮಾಡಿದಂತಾಗುವುದು. ಜೀವನದಲ್ಲಿ ಧನ-ಧಾನ್ಯವನ್ನು ಹೊಂದಲು ಬಯಸುತ್ತೇವೆ ಎಂದಾದರೆ ಮೊದಲು ಲಕ್ಷ್ಮಿ ದೇವಿಯನ್ನು ಖುಷಿ ಪಡಿಸುವ ಮತ್ತು ಆರಾಧಿಸುವ ಕಾರ್ಯ ನೆರವೇರವೇರಬೇಕು. ದೇವಿಗೆ ವಿಶೇಷ ಗೌರವ ಹಾಗೂ ಪೂಜೆಯನ್ನು ಸಲ್ಲಿಸುವುದರ ಮೂಲಕ ತಾಯಿಯ ಕೃಪೆಗೆ ಒಳಗಾಗಬಹುದು. ಜೊತೆಗೆ ಬಯಸಿದ ಸಿರಿ-ಸಂಪತ್ತು ಮನೆಯಲ್ಲಿ ತುಂಬಿರುತ್ತವೆ ಎಂಬ ನಂಬಿಕೆಯಿದೆ.
ಜೇಬಿನಲ್ಲಿ ಉಪ್ಪನ್ನು ಇಟ್ಟುಕೊಳ್ಳಿ
ಉಪ್ಪು ಕೆಡುವಂತಹ ವಸ್ತುಗಳನ್ನು ಹಾಗೂ ದುಷ್ಟ ಶಕ್ತಿ ವಿರುದ್ಧ ಹೋರಾಡುವಂತಹ ಶಕ್ತಿಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿಯೇ ದೆವ್ವ ಮತ್ತು ಭೂತಗಳು ಉಪ್ಪಿಗೆ ಹೆದರುತ್ತವೆ ಎಂದು ಹೇಳಲಾಗುವುದು. ಉಪ್ಪು ದೈವಿಕ ಶಕ್ತಿ ಹೊಂದಿರುವುದರಿಂದ ನಾಶವಾಗುವ ಪರಿಸ್ಥಿತಿ ಹಾಗೂ ವಸ್ತುಗಳನ್ನು ಕಾಪಾಡುವ ಶಕ್ತಿಯನ್ನು ಪಡೆದುಕೊಂಡಿದೆ. ದೂರದ ಪ್ರಯಾಣ ಮಾಡುವಾಗ ಅಥವಾ ನಿಮ್ಮ ಇಷ್ಟದ ಸ್ಥಳಗಳಿಗೆ ಹೋಗುವಾಗ ಜೇಬಿನಲ್ಲಿ ಸ್ವಲ್ಪ ಸಮುದ್ರದ ಉಪ್ಪನ್ನು ಕೊಂಡೊಯ್ಯಬೇಕು ಎಂದು ಹೇಳಲಾಗುವುದು. ಹೀಗೆ ಮಾಡುವುದರಿಂದ ಪ್ರಯಾಣದಲ್ಲಿ ಉಂಟಾಗುವ ತೊಂದರೆ ಹಾಗೂ ಅಪಘಾತಗಳನ್ನು ತಡೆಯುವುದು ಎಂದು ಹೇಳಲಾಗುವುದು.
ಉಪ್ಪನ್ನು ಶುಕ್ರವಾರ ಖರೀದಿಸಬೇಕು
ಉಪ್ಪು ಲಕ್ಷ್ಮಿ ದೇವಿಯ ಪ್ರತಿರೂಪ ಎಂದು ಪರಿಗಣಿಸಲಾಗುವುದು. ಹಾಗಾಗಿ ಮನೆಗೆ ಉಪ್ಪನ್ನು ತರಲು ಅಥವಾ ಖರೀದಿಸಲು ಶುಕ್ರವಾರ ಅತ್ಯಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗುವುದು. ಶುಕ್ರವಾರದಂದು ಉಪ್ಪನ್ನು ಖರೀದಿಸಿ ತಂದು, ಡಬ್ಬದಲ್ಲಿ ವರ್ಗಾಯಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಮನೆಗೆ ಆಗಮಿಸುವಳು. ಹಾಗೆಯೇ ಜೀವನದಲ್ಲಿ ಇರುವ ಆರ್ಥಿಕ ತೊಂದರೆಗಳು ಸುಧಾರಣೆ ಕಾಣುತ್ತವೆ. ಸಾಲ ಬಾಧೆ ಇದ್ದರೆ ನಿವಾರಣೆಯಾಗುವುದು ಎನ್ನುವ ನಂಬಿಕೆಯಿದೆ.
ನೀರು ಮತ್ತು ಉಪ್ಪು
ನಿತ್ಯವೂ ಮನೆಯನ್ನು ಸ್ವಚ್ಛಗೊಳಿಸುವ ಹಾಗೂ ಒರೆಸುವ ಪ್ರಕ್ರಿಯೆ ಇರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ನಿತ್ಯವೂ ನಾವು ನೆಲ ಒರೆಸುವಾಗ, ನೀರಿಗೆ ಒಂದು ಟೀ ಚಮಚ ಅಥವಾ ಚಿಟಕೆ ಉಪ್ಪನ್ನು ಬೆರೆಸಿ. ನಂತರ ಆ ನೀರಿನ ಸಹಾಯದಿಂದ ಮನೆಯನ್ನು ಒರೆಸಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹಾಗೂ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆಯಿದೆ. ಅಲ್ಲದೆ ಸಾಕಷ್ಟು ರೋಗ ಪೀಡಿತ ಸೂಕ್ಷ್ಮಾಣುಗಳು ನಾಶವಾಗುತ್ತವೆ ಎಂದು ಹೇಳಲಾಗುವುದು.
ಗಾಜಿನ ಡಬ್ಬದಲ್ಲಿ ಉಪ್ಪು
ಸಾಮಾನ್ಯವಾಗಿ ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಈ ಕ್ರಮವು ತಪ್ಪು. ಇದು ಋಣಾತ್ಮಕ ಶಕ್ತಿಯ ಆಗಮನಕ್ಕೆ ಆಹ್ವಾನ ನೀಡುವುದು. ಹಾಗಾಗಿ ಗಾಜಿನ ಡಬ್ಬದಲ್ಲಿ, ಮಣ್ಣಿನ ಪಾತ್ರೆಯಲ್ಲಿ ಅಥವಾ ಪಿಂಗಾಣಿ ಪಾತ್ರದಲ್ಲಿ ಉಪ್ಪನ್ನು ಸಂಗ್ರಹಿಸಿ ಇಡಬೇಕು. ಇದರಿಂದ ಉಪ್ಪು ಸಹ ಉತ್ತಮ ಗುಣಮಟ್ಟದೊಂದಿಗೆ ದೀರ್ಘ ಸಮಯ ಇರುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುವುದು ಎನ್ನುವ ನಂಬಿಕೆಯಿದೆ.
ಉಪ್ಪನ್ನು ವ್ಯರ್ಥ ಮಾಡಬಾರದು
ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಮನೆಗೆ ತರುವುದು ಅಥವಾ ತಂದು ಒಂದೆಡೆ ಸಂಗ್ರಹ ಇಡುವುದು ಮಾಡಬಾರದು. ಅಗತ್ಯಕ್ಕೆ ತಕ್ಕಷ್ಟು ಉಪ್ಪನ್ನು ಮನೆಗೆ ತಂದು ಅದನ್ನು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಆಗ ಲಕ್ಷ್ಮಿ ದೇವಿ ಮನೆಯಲ್ಲಿ ಅಗತ್ಯವಾದ ಸಮೃದ್ಧಿಯನ್ನು ಹೆಚ್ಚಿಸುವಳು ಹಾಗೂ ಮನಸ್ಸಿಗೆ ಸಂತೋಷ ನೀಡುವಳು.