ಬೆಂಗಳೂರು: ಕಳೆದ ಒಂದು ತಿಂಗಳಿಂದಲೂ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಷಯ ಸದ್ದು ಮಾಡುತ್ತಲೇ ಇದೆ. ಪ್ರಜ್ವಲ್ ರೇವಣ್ಣ 31 ರಂದು ಎಸೈಟಿ ಮುಂದೆ ಹಾಜರಾಗುತ್ತಿರುವ ನಿಜವಾದ ಕಾರಣ ಏನು? ಪೆನ್ಡ್ರೈವ್ ಹಂಚಿಕೆ ಕೇಸ್ ನ ಆರೋಪಿಗಳನ್ನು ಕೋರ್ಟ್ ಬಳಿಯೇ ಲಾಕ್ ಮಾಡಿದ ಎಸೈಟಿ. ಇನ್ನು ಬಂಧನಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಬೇಲ್ ಕಥೆ ಏನಾಯ್ತು ಅನ್ನೋ ಕಂಪ್ಲೀಟ್ ಡೀಟೇಲ್ಸ್ ಹೇಳ್ತಿವಿ ನೋಡಿ..
ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರೋ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡು 31 ದಿನ ಕಳೆದಿದೆ. ಅಜ್ಞಾತಸ್ಥಳದಿಂದ ವಿಡಿಯೋ ಮಾಡಿ ಹೇಳಿಕೆ ಕೊಟ್ಟಿದ್ದ ಪ್ರಜ್ವಲ್ ದೇವೇಗೌಡರಿಗೆ ತಂದೆ ತಾಯಿಗೆ ಕುಮಾರಸ್ವಾಮಿಯವರಿಗೆ ಪಕ್ಷದ ಕಾರ್ಯಕರ್ತರಿಗೆ ಕ್ಷಮೆ ಕೇಳಿದ್ರು.ಜೊತೆಗೆ ತನ್ನ ಮೇಲಿರುವ ಆರೋಪಗಳು ಸುಳ್ಳು ಇದು ರಾಜಕೀಯ ಷಡ್ಯಂತ್ರ ಎಂದಿದ್ದ ಪ್ರಜ್ವಲ್ ಇದೇ 31ರಂದು ಎಸೈಟಿ ಮುಂದೆ ಬಂದು ತನಿಖೆ ಎದುರಿಸುವುದಾಗಿ ಹೇಳಿದ್ರು.
![Demo](https://ainlivenews.com/wp-content/uploads/2023/12/spoorthi-1.jpg)
Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?
ಆದ್ರೆ ಪ್ರಜ್ವಲ್ ರೇವಣ್ಣ ಹೇಳಿರೋದೆಲ್ಲಾ ಸತ್ಯಾನಾ? 31 ರಂದು ಎಸೈಟಿ ಮುಂದೆ ಬರ್ತಿರೋದೋ ಈ ನೆಲದ ಕಾನೂನಿನ ಮೇಲಿರೋ ಗೌರವದಿಂದಾನಾ? ಆದರೆ ಅಸಲಿ ಸತ್ಯನೇ ಬೇರೆ ಇದೆ. ಹೌದು ಪ್ರಜ್ವಲ್ ರೇವಣ್ಣ ದೇವೇಗೌಡರು, ಕುಮಾರಸ್ವಾಮಿ ಮನವಿಗೆ ಬರ್ತಾ ಇಲ್ಲ. ಮೇ.31ಕ್ಕೆ ಬೆಂಗಳೂರಿಗೆ ಪ್ರಜ್ವಲ್ ಬರ್ತಿರೋದೆ ಪಾಸ್ ಪೋರ್ಟ್ ಎಕ್ಸ್ ಪರಿ ಅಗ್ತಿರೋದಕ್ಕೆ. ಮೇ.31ಕ್ಕೆ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ ಪೋರ್ಟ್ ಅವಧಿ ಮುಗಿಯುತ್ತೆ. ಪಾಸ್ ಪೋರ್ಟ್ ಅವಧಿ ಮುಗಿದ್ರೆ ಯಾವ ದೇಶದಲ್ಲಿ ಇರ್ತಾರೋ ಅಲ್ಲಿ ಅರೆಸ್ಟ್ ಆಗೋ ಭೀತಿಯಿಂದ ಪ್ರಜ್ವಲ್ ಬೆಂಗಳೂರಿಗೆ ಬರುತ್ತಿರೋದು ಎನ್ನಲಾಗುತ್ತಿದೆ.
ಇನ್ನು ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ,ಪ್ರಜ್ವಲ್ ವಿಚಾರದಲ್ಲಿ ಎಸ್ ಐಟಿ ಎಲ್ಲಾ ಪ್ರಯತ್ನಗಳನ್ನ ಮಾಡುತ್ತಿದೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಪ್ರಜವಲ್ ವಿರುದ್ದ ವಾರೆಂಟ್ ಜಾರಿಯಾಗಿದ್ದು ವಿದೇಶಾಂಗ ಲಾಖೆ ಮೂಲಕ ಶೋಕಾಷ್ ನೋಟೀಸ್ ಹಾಗು ಬ್ಲೂ ಕಾರ್ನರ್ ಕೊಟ್ಟಿದೆ. ಮೇ 31ಕ್ಕೆ ಪ್ರಜ್ವಲ್ ಸಂಸದ ಸ್ಥಾನ ಅಂತ್ಯವಾಗಲಿದೆ ಪ್ರಜ್ವಲ್ ಸಂಸದ ಸ್ಥಾನ ಅಂತ್ಯವಾದರೆ ರಾಜತಾಂತ್ರಿಕೆ ಪಾಸ್ ಪೋರ್ಟ್ ರದ್ದಾಗಲಿದೆ ಎಲ್ಲಾ ತಿಳಿದು ವಿಡಿಯೋ ಮೂಲಕ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)