ಇನ್ಮುಂದೆ ತೂಕ ಹೆಚ್ಚಳ ಹಾಗೂ ಮಧುಮೇಹ ಸಮಸ್ಯೆ ನಿವಾರಣೆಗೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಇದೊಂದು ತರಕಾರಿಯನ್ನು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಾಕು. ಈ ಎರಡು ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತದೆ. ಹಾಗಾದ್ರೆ ಆ ತರಕಾರಿ ಯಾವುದು ಎಂದು ನೋಡೋಣ ಬನ್ನಿ.
ಚಲಿಸುತ್ತಿದ್ದ ಶಾಲಾ ಬಸ್ ನಲ್ಲೇ ಹೃದಯಾಘಾತ.. ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!
ಹೌದು ಈ ಎಲ್ಲಾ ರೋಗಗಳಿಗೂ ಬೆಂಡೆಕಾಯಿಯನ್ನು ರಾಮಬಾಣ ಎಂದು ಹೇಳಬಹುದು. ಇದಕ್ಕಾಗಿ ಪ್ರತಿದಿನ ಬೆಂಡೆಕಾಯಿ ನೆನೆಸಿದ ನೀರನ್ನು ಕುಡಿಯುವುದು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇಲ್ಲದಿದ್ದರೆ ಬೆಂಡೆಕಾಯಿಯನ್ನು ಕರಿದು ಅಥವಾ ಅನೇಕ ರೀತಿಯಲ್ಲೂ ಸಹ ಸೇವಿಸಬಹುದಾಗಿದೆ. ಅನೇಕ ಮಂದಿಗೆ ಬೆಂಡೆಕಾಯಿಯಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.
ವಾಸ್ತವವಾಗಿ ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ, ತೂಕ ನಷ್ಟ ಸೇರಿದಂತೆ ನಾನಾ ಆರೋಗ್ಯ ನಮಗೆ ಒದಗಿಸುತ್ತದೆ. ಈ ಬಗ್ಗೆ ಪೌಷ್ಟಿಕತಜ್ಞೆ ನೀಪಾ ಆಶಾರಾಮ್ ಅವರು ಕೆಲವೊಂದಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ. ಅವರು ಹೇಳುವ ಪ್ರಕಾರ, ಬೆಂಡೆಕಾಯಿಯಲ್ಲಿ ಫೈಬರ್, ವಿಟಮಿನ್ ಬಿ 6, ಕರಗುವ ಫೈಬರ್, ಮ್ಯಾಂಗನೀಸ್, ಆಂಟಿಆಕ್ಸಿಡೆಂಟ್ಗಳು ಮತ್ತು ಫೋಲೇಟ್ ಇದೆ. ಈ ಅಂಶದಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲಾಗುತ್ತದೆ.
ಬೆಂಡೆಕಾಯಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ. ಇದರ ಪರಿಣಾಮ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುವುದಿಲ್ಲ. ಮಧುಮೇಹಿಗಳು ಆಹಾರವಾಗಿ ಇದನ್ನು ಸೇವಿಸಲು ಸೂಕ್ತ ತರಕಾರಿ ಆಗಿದೆ. ಬೆಂಡೆಕಾಯಿ ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ಇದರ ಪರಿಣಾಮ ದೀರ್ಘಕಾಲದವರೆಗೆ ಇದು ನಮ್ಮ ಹೊಟ್ಟೆಯನ್ನು ತುಂಬಿಸಿರುತ್ತದೆ. ಜೊತೆಗೆ ಹಸಿವಿನ ನೋವಿನ ಪ್ರವೃತ್ತಿ ಕಡಿಮೆಯಾಗಿದೆ.
ಫೈಬರ್ ತುಂಬಿದ ಓಟ್ಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅನಗತ್ಯ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಪರಿಣಾಮಕಾರಿ ಮಾರ್ಗವಾಗಿದೆ.