ಕಿಡ್ನಿ ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದ್ದು, ಅದರ ಮುಖ್ಯ ಕಾರ್ಯವೆಂದರೆ ದೇಹದಲ್ಲಿನ ಕೊಳೆಯನ್ನು ಫಿಲ್ಟರ್ ಮಾಡುವುದು. ಇದರಿಂದಾಗಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಬಿಡುಗಡೆಯಾಗುತ್ತವೆ, ಇದು ಅನೇಕ ರೋಗಗಳು ಮತ್ತು ಹಾನಿಗಳನ್ನು ತಪ್ಪಿಸಲು ಸುಲಭವಾಗುತ್ತದೆ. ಕಿಡ್ನಿ ರೋಗವನ್ನು ʼಸೈಲೆಂಟ್ ಕಿಲ್ಲರ್ʼ ಎಂತಲೂ ಕರೆಯುತ್ತಾರೆ. ಏಕೆಂದರೆ ಇದರ ಆರಂಭಿಕ ಲಕ್ಷಣಗಳು ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಕಾರಣಕ್ಕಾಗಿಯೇ ನೀವು ತುಂಬಾ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಈ ರೋಗವು ನಿಮಗೆ ಮಾರಕವಾಗಬಹುದು ಮತ್ತು ಇದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಕಿಡ್ನಿ ವೈಫಲ್ಯಗೊಂಡರೆ ನೀವು ಯಾವ ರೋಗಗಳನ್ನು ಎದುರಿಸಬೇಕಾಗುತ್ತದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ…
ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ?: HDK
ದೇಹದ ಪ್ರತಿ ಅಂಗಗಳೂ ಅದರದ್ದೇ ಆದ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡುತ್ತವೆ. ಇಂತಹ ಅಂಗಗಳಲ್ಲಿ ಮೂತ್ರ ಪಿಂಡ ಕೂಡ ಒಂದಾಗಿದೆ. ಮೂತ್ರಪಿಂಡಗಳು ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವ ಸಣ್ಣ ಅಂಗವಾಗಿದೆ. ಇದು ತ್ಯಾಜ್ಯ ಉತ್ಪನ್ನಗಳನ್ನು ಫಿಲ್ಟರ್ ಮಾಡುವ, ದೇಹದಲ್ಲಿ ದ್ರವ ಪದಾರ್ಥ ಸಮತೋಲನಗೊಳಿಸುವ ಹಾಗೇಯೇ ಇನ್ನೂ ಅನೇಕ ಅಗತ್ಯ ಕೆಲಸ ಮಾಡುತ್ತದೆ.
ಕಿಡ್ನಿಗಳ ಪ್ರಮುಖ ಕೆಲಸಕಾರ್ಯಗಳು ಏನೆಂದ್ರೆ, ರಕ್ತದಿಂದ ವಿಷಕಾರಿ ಹಾಗೂ ತ್ಯಾಜ್ಯ ಅಂಶವನ್ನು ತೆಗೆದು ಹಾಕಿ ಮೂತ್ರದ ಮೂಲಕ ಸಹಾಯ ಮಾಡುತ್ತದೆ ಅಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸಲು, ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಕೂಡ ಇವುಗಳ ಪಾತ್ರ ಬಲು ದೊಡ್ಡದು. ಇಂದಿನ ಲೇಖನದಲ್ಲಿ, ಬೆಳಗ್ಗೆ ಎದ್ದ ಕೂಡಲೇ, ಕಾಣಿಸಿ ಕೊಳ್ಳುವ ಕೆಲವೊಂದು ರೋಗ ಲಕ್ಷಣಗಳು ಕಿಡ್ನಿ ಕಾಯಿಲೆ ಸಮಸ್ಯೆ ಯನ್ನು ಸೂಚಿಸುತ್ತವೆ.. ಹಾಗಾದ್ರೆ ಅಂತಹ ರೋಗಲಕ್ಷಣಗಳು ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ನೋಡುತ್ತಾ ಹೋ ಗೋಣ…
ಮೂತ್ರದಲ್ಲಿ ರಕ್ತ ಕಂಡುಬರುವುದು:-
ಬೆಳಗ್ಗೆ ಎದ್ದ ಕೂಡಲೇ ಮೂತ್ರ ವಿಸರ್ಜನೆ ಮಾಡಲು ಹೋದಾಗ, ಮೂತ್ರದಲ್ಲಿ ರಕ್ತ ಕಂಡುಬಂದರೆ, ಅದು ಕಿಡ್ನಿ ಸಮಸ್ಯೆಯ ಲಕ್ಷಣಗಳು ಎಂದು ತಿಳಿದುಕೊಳ್ಳಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೀಮ ಟುರಿಯ ಎಂದು ಕರೆಯಲಾಗುತ್ತದೆ. ಅಂದರೆ ಮೂತ್ರದಲ್ಲಿ ರಕ್ತ ಹೋಗು ವುದು ಎಂದರ್ಥ.ಹೀಗಾಗಿ ಮೂತ್ರದಲ್ಲಿ ರಕ್ತ ಕಂಡುಬಂದರೆ ಆಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
ವಾಕರಿಕೆ ಮತ್ತು ವಾಂತಿ ಆಗುವ ಹಾಗೆ ಅನಿಸುವುದು:-
ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಸದಾ ವಾಕರಿಕೆ ಮತ್ತು ವಾಂತಿಯಾ ಗುವ ಅನುಭವ ಆಗುತ್ತದೆ! ಪ್ರತಿದಿನ ಹೀಗೆ ಸಮಸ್ಯೆ ಕಾಡುತ್ತಿದ್ದರೆ, ತಕ್ಷಣ ವೇ ವೈದ್ಯರನ್ನು ಸಂಪರ್ಕಿಸಿ ಸಂಬಂಧಪಟ್ಟ ಪರೀಕ್ಷೆ ಮಾಡಿಸಿ ಕೊಳ್ಳು ವುದು ಒಳ್ಳೆಯದು. ಯಾಕೆಂದ್ರೆ ಬೆಳಗ್ಗೆ ಎದ್ದ ಕೂಡಲೇ ಕಾಣಿಸಿ ಕೊಳ್ಳುವ ಈ ಲಕ್ಷಣಗಳು, ನಿಮ್ಮ ಎರಡೂ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸೂಚಿಸುವ ಸೂಚನೆಯಾಗಿದೆ.
ಕಾಲುಗಳು ಊದಿಕೊಳ್ಳುವುದು:-
ಬೆಳಗ್ಗೆ ಎದ್ದ ಕೂಡಲೇ ಇದ್ದಕ್ಕಿದಂತೆ ಕಾಲುಗಳ ಪಾದಗಳು ಊದಿಕೊಂಡಿ ದ್ದರೆ, ಕಿಡ್ನಿಗಳಲ್ಲಿ ಸಮಸ್ಯೆಯಿದೆ ಎಂದು ತಿಳಿದುಕೊಳ್ಳಬೇಕು. ಯಾಕೆಂದ್ರೆ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿ ಸದಿದ್ದರೆ, ದೇಹದಲ್ಲಿ ಶೇಖರಣೆ ಗೊಂಡಿರುವ ಹೆಚ್ಚಿನ ಪ್ರಮಾಣದ ಉಪ್ಪಿನ ಅಂಶ ಹಾಗೆ ಉಳಿಯುತ್ತದೆ. ಅಲ್ಲದೆ ವಿಷಕಾರಿ ಅಂಶಗಳು ಕೂಡ ದೇಹದಿಂದ ಹೊರಹೋಗದೆ, ಕಾಲು ಗಳ ಪಾದಗಳು ಊದಿಕೊಳ್ಳುವ ಹಾಗೆ ಮಾಡುತ್ತದೆ.
ಆಯಾಸ ನಿಶ್ಯಕ್ತಿ ಕಾಣಿಸಿಕೊಳ್ಳುವುದು:-
ಮೂತ್ರಪಿಂಡಗಳಲ್ಲಿಅಥವಾ ಕಿಡ್ನಿಗಳಲ್ಲಿ ಸಮಸ್ಯೆಗಳು ಕಾಣಿಸಿ ಕೊಂಡಾಗ ಆಯಾಸ, ನಿಶ್ಯಕ್ತಿ ಹಾಗೂ ರಕ್ತ ಹೀನತೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ತ್ಯಾಜ್ಯ ಉತ್ಪನ್ನಗಳು ಸಂಗ್ರಹವಾ ಗುವುದರಿಂದ ಹಾಗೂ ಕೆಂಪು ರಕ್ತ ಕಣಗಳ ಸಂಖ್ಯೆ ಯಲ್ಲಿ ತೀವ್ರ ಕುಸಿತ ಉಂಟಾಗುವು ದರಿಂದ ಕಿಡ್ನಿ ಕಾರ್ಯಕ್ಕೆ ತೊಂದರೆ ಕಾಣಿಸಿಕೊಂಡು, ರಕ್ತಹೀನತೆ, ನಿಶ್ಯಕ್ತಿ ಹಾಗೂ ಬಳಲಿಕೆ ಯಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಬೆಳಗ್ಗೆ ಎದ್ದ ಕೂಡಲೇ ಹೊಟ್ಟೆ ಹಸಿವು ಇರುವುದಿಲ್ಲ!
ಜೀರ್ಣಶಕ್ತಿ ಚೆನ್ನಾಗಿದ್ದರೆ ನಾವು ಪ್ರತಿದಿನ ಸೇವಿಸುವ ಬಹುತೇಕ ಆಹಾರಗಳು ಹೊಟ್ಟೆಯಲ್ಲಿ ಚೆನ್ನಾಗಿ ಜೀರ್ಣ ವಾಗುತ್ತವೆ. ಆದರೆ ಕಿಡ್ನಿ ಗಳು ಹಾಳಾಗಿದ್ದರೆ ಹೊಟ್ಟೆ ಹಸಿವು ಮೊದಲಿನಂತೆ ಇರುವುದಿಲ್ಲ! ಯಾಕೆಂದ್ರೆ ದೇಹದಲ್ಲಿ ವಿಷಕಾರಿ ಅಂಶಗಳ ಶೇಖರಣೆ ಜಾಸ್ತಿ ಆಗುತ್ತಾ ಹೋದಂತೆ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ.