ಯಾದಗಿರಿ: ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನ ಮಾಡಬಾರದು ಎಂದು ಪ್ರಣವಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ‘ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ’ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರಹೇಳಿಕೆ ವಿಚಾರವಾಗಿ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ಸ್ವಾಮೀಜಿ, ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನೀವು ಮಾಡಿದ್ದೆಲ್ಲ ಸರಿ ಅಂತಾ ಒಪ್ಪಿಕೊಳ್ಳೋಕೆ ಸಮುದಾಯದ ಸ್ವಾಮೀಜಿಗಳು ಸಿದ್ದರಿಲ್ಲ. ಸ್ವಾಮೀಜಿಗಳನ್ನ ಅವಮಾನ ಮಾಡಿದ್ರೆ ಮುಂದಿನ ದಿನಗಳಲ್ಲಿ ನೀವೂ ಕೂಡ ಮಠಕ್ಕೆ ಕಾಲಿಡಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ಧೈರ್ಯವಾಗಿ ಹೇಳಿ ನಾವು ಮಠಕ್ಕೆ ಕಾಲಿಡಲ್ಲ ಅಂತಾ. ಆಗ ನಾವು ಕೂಡ ರಾಜಕೀಯಕ್ಕೆಬರೊಲ್ಲ ಅಂತಾ ಹೇಳ್ತೇವೆ. ಚಂದ್ರಶೇಖರ್ ಸ್ವಾಮೀಜಿಗಳು ಹೇಳಿದಾಗ ಎಲ್ಲರೂ ಸ್ವಾಗತ ಮಾಡಿದ್ರು.
ಡಿಕೆ ಸುರೇಶ್, ಬಾಲಕೃಷ್ಣ, ಚೆಲುವರಾಯಸ್ವಾಮಿ ಸೇರಿ ಎಲ್ಲರೂ ಸ್ವಾಗತ ಮಾಡಿದ್ರು. ಅದೇ ಇನ್ನೊಬ್ಬ ಸ್ವಾಮೀಜಿ ಹೇಳಿದರೆ ವಿರುದ್ಧ ಮಾತಾಡ್ತೀರ? ಅಂದರೆ ನಿಮಗೆ ಬೇಕಾದ ಹಾಗೆ ಸ್ವಾಮೀಜಿಗಳು ಮಾತಾಡಬೇಕೆ? ಒಂದು ಕಡೆ ಸ್ವಾಗತ ಮಾಡೋದು, ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡ ಅಂತಾ ಹೇಳೋದು ಇದೆಲ್ಲ ಡಿಕೆ ಶಿವಕುಮಾರ ಅವರ ರಾಜಕೀಯ ಗಿಮಿಕ್ ಎಂದು ತಿರುಗೇಟು ನೀಡಿದರು.