ರಾಮನಗರ:– ಪ್ರತಿ ತಿಂಗಳ 2ನೇ ಮತ್ತು ಕೊನೇ ಶನಿವಾರ ಕನಕಪುರದ ಜನರಿಗೆ ಮೀಸಲಿಡುತ್ತೇನೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್, ಯಾವ ಬಡಾವಣೆಯಲ್ಲಿ ಕರೆಂಟ್ ಇರೋಲ್ಲ?
ಈ ಸಂಬಂಧ ಮಾತನಾಡಿದ ಅವರು,ಕನಕಪುರದ ಜನರಿಗೆ ನನ್ನನ್ನು ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಿಂಗಳಿನ 2ನೇ ಶನಿವಾರ ಹಾಗೂ ಕೊನೇ ಶನಿವಾರ ಅವರಿಗಾಗಿಯೇ ಮೀಸಲಿಡುತ್ತೇನೆ ಎಂದರು.
ಒಬ್ಬ ನಾಯಕರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ, ರಾಮನಗರ ಹೆಸರು ತೆಗೆದರೆ ಸರ್ವನಾಶ ಆಗುತ್ತೆ ಅಂದಿದ್ದಾರೆ. ಹಾಗಾದ್ರೆ ಅಷ್ಟು ಮಂತ್ರಿಗಳೂ, ಸರ್ಕಾರ ಸರ್ವನಾಶ ಆಗಬೇಕಾ?. ಇದಕ್ಕೆ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಹೆಚ್ಡಿಕೆ ವಿರುದ್ಧ ಕಿಡಿಕಾರಿದ್ದಾರೆ
ನಮ್ಮ ಕನಕಪುರದಲ್ಲಿ ಇರುವ ಕಾವೇರಿ ಉದ್ಯಾನವನ ಇಡೀ ರಾಜ್ಯದಲ್ಲೂ ಇಲ್ಲ. ಇಲ್ಲಿನ ಮಕ್ಕಳ ಪ್ರತಿಭೆ ತೋರಿಸೋದಕ್ಕೂ ಜಾಗ ಇರಲಿಲ್ಲ. ಟೆಂಟ್ನಲ್ಲಿ ಮಕ್ಕಳ ಕಾರ್ಯಕ್ರಮ ನಡಿದಿತ್ತು. ಆಗ ಕನಕಪುರ ನನ್ನ ಬಳಿ ಇರಲಿಲ್ಲ. ನಾನು ಬಂದ ಮೇಲೆ ಕನಕಪುರ ಏನಾಗಿದೆ ಎಂಬುದು ನಿಮ್ಮ ಮುಂದಿದೆ. ದೇವೆಗೌಡರು ,ಜಾಫರ್ ಶರೀಫ್ , ಕುಮಾರಸ್ವಾಮಿ ಸಂಸದರಾಗಿದ್ದಾಗ ಕನಕಪುರ ಲೋಕಸಭೆ ಆಗಿತ್ತು. ಕನಕಪುರ ಹೆಸರು ತೆಗೆದು ಇದನ್ನು ಬೆಂಗಳೂರು ಗ್ರಾಮಾಂತರ ಎಂದು ಮಾಡಿದ್ದೇವು
ಇದು ಬೆಂಗಳೂರು ಸಿಟಿ, ಕೆಂಪೇಗೌಡ ಕಟ್ಟಿದ್ದಂತಹ ಬೆಂಗಳೂರು ಜಿಲ್ಲೆ ಇದು. ಆನೇಕಲ್, ದೇವನಹಳ್ಳಿ, ಮಾಗಡಿ, ರಾಮನಗರ ಇವೆಲ್ಲವೂ ಬೆಂಗಳೂರೇ. ನನ್ನ ಹೆಸರು ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್. ನಾವು ಬೆಂಗಳೂರಿನವರು. ಎಚ್ ಡಿ ದೇವೇಗೌಡರ ಹೆಸರೇನು?, ಹರದನಹಳ್ಳಿ, ದೊಡ್ಡೇಗೌಡರು ದೇವೇಗೌಡರು. ತಂದೆ-ತಾಯಿ ಮಾತ್ರ ಇಲ್ಲಿ ಕಷ್ಟದಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅವರ ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಅದಕ್ಕೆ ಅವರ ಮಕ್ಕಳು ಇಲ್ಲೇ ಇರಲಿ, ಇಲ್ಲೇ ಕೆಲಸ ಮಾಡಲಿ ಎಂದು ನಾವು ಪ್ರಯತ್ನ ಮಾಡುತ್ತಾ ಇದ್ದೇವೆ ಎಂದರು.