ನಾವು ಗೆಲ್ಲಲು ಧೋನಿ ಸಿಡಿಸಿದ ಆ ಸಿಕ್ಸರ್ ಕಾರಣ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಚಾಮರಾಜನಗರ: ಒಂದು ತಿಂಗಳಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್ನಲ್ಲಿ ಪತ್ತೆ.. !
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 27 ರನ್ ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಆರ್ ಸಿಬಿ ಪರ ನಾಯಕ ಡು ಪ್ಲೆಸಿಸ್ 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 54 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಉಳಿದಂತೆ ವಿರಾಟ್ ಕೊಹ್ಲಿ47 ರನ್, ರಜತ್ ಪಾಟಿದಾರ್ 41 ರನ್ ಮತ್ತು ಕ್ಯಾಮರೂನ್ ಗ್ರೀನ್ ಅಜೇಯ 38 ರನ್ ಗಳಿಸಿದರು. ಚೆನ್ನೈ ಪರ ಮಿಚೆಲ್ ಸ್ಯಾಂಟ್ನರ್ 4 ಓವರ್ ಎಸೆದು 23 ಬಿಟ್ಟು ಕೊಟ್ಟು ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದು ಮಿಂಚಿದ್ದರು. ಆದರೆ ಆರ್ಸಿಬಿ ನೀಡಿದ 219 ರನ್ಗಳ ಗುರಿಯನ್ನು ಹೊಂದಿದ್ದರೂ, ಪ್ಲೇಆಫ್ಗೆ ಅರ್ಹತೆ ಪಡೆಯಲು ಚೆನ್ನೈ ತಂಡವನ್ನು 200 ರನ್ಗಳಿಗೆ ನಿರ್ಬಂಧಿಸಬೇಕಾಗಿತ್ತು. ರೋಚಕ ಚೇಸಿಂಗ್ನಲ್ಲಿ ಸಿಎಸ್ಕೆ 20 ಓವರ್ಗಳಲ್ಲಿ ಏಳು ವಿಕೆಟ್ಗಳನ್ನು ಕಳೆದುಕೊಂಡು 191 ರನ್ಗಳಿಗೆ ಸೀಮಿತವಾಯಿತು.
ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ದಿನೇಶ್ ಕಾರ್ತಿಕ್ ತಂಡವನ್ನು ಉದ್ದೇಶಿಸಿ ಮಾತನಾಡಿದರು. ‘‘ಧೋನಿ ಬೃಹತ್ ಸಿಕ್ಸರ್ ಬಾರಿಸಿದಾಗ ಚೆಂಡು ಕ್ರೀಡಾಂಗಣದ ಹೊರಗೆ ಬಿದ್ದಿತು. ಇದು ನಮಗೆ ಹೊಸ ಚೆಂಡನ್ನು ನೀಡಿತು’’ ಎಂದು ದಿನೇಶ್ ಕಾರ್ತಿಕ್ ಹೇಳಿದರು. ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನ ಹೊರತಾಗಿಯೂ, ತಮ್ಮ ತಂಡವು ಸತತವಾಗಿ ಗೆಲುವಿನೊಂದಿಗೆ ಪ್ಲೇಆಫ್ ತಲುಪಲು ಕಠಿಣ ಹೋರಾಟ ನಡೆಸಿತು ಎಂದು ಡಿಕೆ ಮೆಚ್ಚುಗೆ ವ್ಯಕ್ತಪಡಿಸಿದರು.