Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Renukacharya: ಸ್ಪೀಕರ್ ಸ್ಥಾನಕ್ಕೆ ಅವಮಾನ – ಜಮೀರ್ ರಾಜೀನಾಮೆಗೆ ರೇಣುಕಾಚಾರ್ಯ ಆಗ್ರಹ

    AIN AuthorBy AIN AuthorNovember 18, 2023
    Share
    Facebook Twitter LinkedIn Pinterest Email

    ದಾವಣಗೆರೆ:- ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಸಂಬಂಧ ಮಾತನಾಡಿದ ಅವರು, ಜಮೀರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಿಂದ ಜಮೀರ್ ಅಹ್ಮದ್ ವಜಾಗೆ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ. ಜಮೀರ್ ನೀವು ರಾಜ್ಯದ ಸಚಿವರಾ, ಕೇವಲ ಅಲ್ಪ ಸಂಖ್ಯಾತರ ಸಚಿವರಾ..? ಈ ಬಗ್ಗೆ ಸಚಿವ ಜಮೀರ್ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಲಾಜಿಲ್ಲದೇ ಅವರನ್ನ ವಜಾ ಮಾಡಬೇಕು. ಸ್ಪೀಕರ್ ಸ್ಥಾನಕ್ಕೆ ಜಮೀರ್ ಅಹ್ಮದ್ ಅವಮಾನ ಮಾಡಿದ್ದಾರೆ. ಅಲ್ಪ ಸಂಖ್ಯಾತರ ಒಲೈಕೆಗಾಗಿ ಪ್ರಚಾರದಲ್ಲಿ ಹೇಳಿಕೆ ನೀಡಿದ್ದಾರೆ.

    Demo

    ಯು ಟಿ ಖಾದರ್ ಗೆ ಸಿಎಂ ಸೇರಿ ಎಲ್ಲರು ಸಭಾಧ್ಯಕ್ಷರೆ ಅಂತ ಸಂಬೋಧಿಸುತ್ತಾರೆ. ಸಾಬರೇ ಅಂತ ತಲೆ ಬಾಗುತ್ತಾರಾ ಅವರಿಗೆ …?
    ಅದು ಸಾಂವಿಧಾನಿಕ ಹುದ್ದೆ ಅದಕ್ಕೆ ಗೌರವವಿದೆ. ನೀವು ಅದನ್ನ ರಾಜಕೀಯವಾಗಿ ದುರುಪಯೋಗ ಮಾಡಿಕೊಂಡಿದ್ದೀರಿ. ಹಿಂದೆ ಡಿಜೆ ಹಳ್ಳಿ – ಕೆ ಜೆ ಹಳ್ಳಿ ಕೇಸ್ ಲ್ಲಿ ಕೂಡ ಜಮೀರ್ ವಿವಾಧಾತ್ಮಕ ಹೇಳಿಕೆ ನೀಡಿದ್ದರು. ಅವರು ನಿರಂತರವಾಗಿ ವಿವಾಧಾತ್ಮಕ ಹೇಳಿಕೆ ನೀಡುತ್ತಾರೆ.

    ಒಂದು ವರ್ಗ ಓಲೈಕೆ ಮಾಡಲು ಹೇಳಿಕೆ ನೀಡಲಾಗುತ್ತಿದೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಟೀ ಮಾರಿಕೊಂಡು ಜೀವನ ಮಾಡುತ್ತೇನೆಂಬ ಯತ್ನಾಳ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಆಯ್ಕೆಯನ್ನ ಪಕ್ಷಾತೀತವಾಗಿ ಸ್ವಾಗತ ಮಾಡಲಾಗಿದೆ. ಯತ್ನಾಳ ಜೊತೆ ಹಿರಿಯರು ಮಾತನಾಡುವುದಾಗಿ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ನಾವೆಲ್ಲರು ಒಟ್ಟಾಗಿ ಹೋಗುವುದು ಒಳ್ಳೆಯದು. ಈ ನಾನೇನಾದರು ಮಾತಾಡಿದ್ರೆ ಯಡಿಯೂರಪ್ಪ ಹೇಳಿದ್ದಾರೆ ಅಂತಾರೆ. ಯಡಿಯೂರಪ್ಪ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಕೇಂದ್ರ ನಾಯಕರ ನೇಮಕವನ್ನ ನಾವು ಸ್ವಾಗತಿಸಬೇಕು. ವಿಪಕ್ಷ ನಾಯಕ ಅಶೋಕ್ ಆಯ್ಕೆಯಿಂದ ಕಾಂಗ್ರೆಸ್ ಗೆ ದೊಡ್ಡ ಹೊಡೆತ. ಇಬ್ಬರು ಯುವ ನಾಯಕರು ಬಿಜೆಪಿ ಜೋಡೆತ್ತಾಗಿದ್ದಾರೆ. ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಕ್ಷದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಎಲ್ಲ ಸರಿಯಾಗತ್ತೆ. ಮುಂದಿನ ಲೋಕಸಭೆ ಚುನಾವಣೆ ಗೆಲ್ಲುತ್ತೇವೆ. ಎಲ್ಲಿ ಕಳೆದು ಹೋಗಿದ್ದೇವೆ, ಮತ್ತೆ ವಾಪಸ್ ಪಡೆಯುತ್ತೇವೆ. ಅಧ್ಯಕ್ಷರಾದ ಬಳಿಕ ವಿಜಯೇಂದ್ರ ಎಲ್ಲ ಮಠಗಳ ಆಶೀರ್ವಾದ ಬೇಡುತ್ತಿದ್ದಾರೆ. ಮಠಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಹಿರಿಯರ ಮಾರ್ಗದರ್ಶನ ಆಶೀರ್ವಾದ ಪಡೆಯುತ್ತಿದ್ದಾರೆ. ಮುಂದಿನ ಜಿಪಂ, ತಾಪಂ ಚುನಾವಣೆ ಸವಾಲಾಗಿ ಸ್ವೀಕಾರ ಮಾಡಿದ್ದಾರೆ.

    ವಿಜಯೇಂದ್ರನಿಂದ ಬಿಜೆಪಿಗೆ ಆನೆ ಬಲ ಬಂದಿದೆ. ಯಡಿಯೂರಪ್ಪ ಮಗ ಅಂತ ಅವರಿಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಅವರಿಗೆ ಸಂಘ ಪರಿವಾರ, ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ಧಾರೆ. ಸಂಘಟನೆ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ ಎಂದರು.


    Share. Facebook Twitter LinkedIn Email WhatsApp

    Related Posts

    ಕಲಬುರಗಿ: KEA ಪರೀಕ್ಷೆ ಅಕ್ರಮ ಕೇಸ್, ಇಬ್ಬರು ಪ್ರಾಂಶುಪಾಲರು ಅಂದರ್..

    November 29, 2023

    ಹುಬ್ಬಳ್ಳಿ: ಸ್ಕೈಪಿಂಗ್ ಮಷಿನ್ ಪೂರೈಸಿದ ವಂಚಕನ ಬಂಧನ

    November 29, 2023

    ಧಾರವಾಡ: ವಿಷ ಕುಡಿಯುತ್ತಿದ್ದೇನೆ I am SORRY, ವೀಡಿಯೋ ಮಾಡಿ ಸೂಸೈಡ್ ಗೆ ಯತ್ನಿಸಿದ ಪಿಡಿಒ

    November 29, 2023

    Satish Jarakiholi : ಬಿ.ಆರ್.ಪಾಟೀಲ್ ಸಿಎಂ ಗೆ ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ -ಸತೀಶ್ ಜಾರಕಿಹೊಳಿ

    November 29, 2023

    ಪ್ರೆಸ್ v/s ಪೋಲೀಸ್ ಕ್ರಿಕೆಟ್ ಪಂದ್ಯ, ಮೀಡಿಯಾ ಟೀಂ ಭರ್ಜರಿ ಗೆಲುವು

    November 29, 2023

    ರಾಜೀನಾಮೆ ಕುರಿತು ಸಿಎಂಗೆ ಬಿಆರ್ ಪಾಟೀಲ್ ಪತ್ರ ವಿಚಾರ – ಬಸವರಾಜ್ ಹೊರಟ್ಟಿ ಹೇಳಿದಿಷ್ಟು!

    November 29, 2023

    ಕೋಲಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ, ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

    November 29, 2023

    ನೆಲಮಂಗಲ: ವೃದ್ದ ಮಹಿಳೆ ಮೇಲೆ ಚಿರತೆ ದಾಳಿ, ಸೊಂಟದ ಭಾಗ ಗಂಭೀರ ಗಾಯ

    November 29, 2023

    ಹಿಡಕಲ್ ಡ್ಯಾಂ: ಅನಾಮಿಕ ಮುಸುಕದಾರಿ ವ್ಯಕ್ತಿಗಳಿಂದ ಕಳ್ಳತನಕ್ಕೆ ಯತ್ನ

    November 29, 2023

    ಬೆಳಗಾವಿ: ಚೀಟಿ ತೋರಿಸಿ ಮಾಂಗಲ್ಯ ಎಗರಿಸಿದ ಐನಾತಿ ಕಳ್ಳ

    November 29, 2023

    Chaluvarayaswamy: ಕೃಷಿ ಸಚಿವರಿಂದ ಬಳ್ಳಾರಿ ತಾಲ್ಲೂಕಿನಲ್ಲಿ ಬರ ಪರಿಶೀಲನೆ

    November 29, 2023

    Dharwad: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.