ಬೆಂಗಳೂರು:- ವರ ಮಹಾಲಕ್ಷ್ಮಿ ಹಬ್ಬದ ನಡುವೆಯು ಸಿಎಂ ಸಿದ್ದರಾಮಯ್ಯ ಇಂದು ಸಾಲು ಸಾಲು ಸಭೆಗಳನ್ನ ನಡೆಸಿದ್ರು. ರಾಜ್ಯದಲ್ಲಿ ಹಲವು ಕಡೆ ಮಳೆ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಸಿಎಂ ಇವತ್ತು ಸಭೆಯನ್ನ ನಡೆಸಿದ್ರು. ಸಭೆಯಲ್ಲಿ ಹಲವು ಸೂಚನೆಯನ್ನು ಕೊಟ್ಟು ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ. ಜೊತೆಗೆ ಮತ್ತೊಂದು ಮಹತ್ವದ ವಿಚಾರ ಅಂದ್ರೆ ಎರಡು ಬ್ಯಾಂಕ್ ನ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ..
ಸಾರ್ವಜನಿಕರೇ ಎಚ್ಚರ ಎಚ್ಚರ: ನಾಳೆ ಕರ್ನಾಟಕದಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್!
ಕೇಂದ್ರ ಸರ್ಕಾರದ ವಿರುದ್ದ ಮತ್ತೆ ರಾಜ್ಯ ಸರ್ಕಾರ ಹೋರಾಟಕ್ಕೆ ಸಜ್ಜಾಗ್ತಿದೆ ಆಗಸ್ಟ್ 28 ರಿಂದ 30 ರ ವರೆಗೆ ಕೇಂದ್ರ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡ್ತಿದೆ. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ಬೆಳಗ್ಗೆ 11 ಗಂಟೆಗೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ರು. 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ವಾದಿಸುತ್ತಿದ್ದಾರೆ. ಅದಕ್ಕೆ 16 ನೇ ಹಣಕಾಸು ಆಯೋಗದ ಮುಂದೆ ನಮ್ಮ ರಾಜ್ಯಕ್ಕೆ ಆಗಿರೋ ಅನ್ಯಾಯವನ್ನು ಹೇಳಲು ನಿರ್ಧರಿಸಲಾಗಿದೆ. ಹಾಗೇ ನಮ್ಮ ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಪ್ರಕಾರ 11,500 ಕೋಟಿ ಕೊಡಬೇಕಿತ್ತು. ನಿರ್ಮಲಾ ಸೀತಾರಾಮನ್ ಹಣ ಕೊಟ್ಟಿದ್ದಿವಿ ಅಂತ ಹೇಳಿದ್ದಾರೆ. ವಾಸ್ತವವಾಗಿ ಕೊಟ್ಟಿಲ್ಲ ಎಂದು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಹಾಗೇ ಈ ಕುರಿತು 16ನೇ ಹಣಕಾಸಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ. ಹಾಗೇ ಎಸ್ ಬಿ ಐ ಹಾಗೂ ಪಿಎನ್ಬಿ ಬ್ಯಾಂಕ್ ನಲ್ಲಿಟ್ಟಿದ್ದ ಠೇವಣಿಯನ್ನ ರಾಜ್ಯದ ಖಜಾನೆಗೆ ವರ್ಗಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ.ಈ ಕುರಿತು ಬ್ಯಾಂಕ್ ಅಧಿಕಾರಿಗಳು ಇಂದು ಸಿಎಂ ಸಿದ್ದರಾಮಯ್ಯ ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ರು. ಹಾಗೇ ವಾಲ್ಮೀಕಿ ಹಗರಣವಾದ ಮೇಲೆ ಸರ್ಕಾರ ಅಲರ್ಟ್ ಆಗಿದೆ. ಬ್ಯಾಂಕ್ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಗೆ ಬ್ಯಾಂಕ್ ಖಾತೆಗಳನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಖಾತೆ ಹಣಕಾಸು ವರ್ಗಾವಣೆ ಸಂಬಂಧ 15 ದಿನದ ಕಾಲಾವಾಕಾಶ ಕೇಳಿದ್ದು , ಮತ್ತೆ ನಿರ್ಧಾರವನ್ನು ಪರಿಷ್ಕರಿಸುವಂತೆ ಬ್ಯಾಂಕ್ ಅಧಿಕಾರಿಗಳು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ
ರಾಜ್ಯದ ಹಲವು ಕಡೆ ಮಳೆ ಮುಂದುವರಿದಿದೆ ಉತ್ತರ ಕನ್ನಡದ ಶಿರೂರು ದುರಂತ ಘಟಿಸಿ ಹೋಗಿದೆ. ಅಲ್ಲೇ ಪಕ್ಕದ ಕಾಳಿ ಸೇತುವೆನೂ ಮುರಿದು ಬಿದ್ದಿದೆ. ಟಿ ಬಿ ಡ್ಯಾಮ್ ಕ್ರಸ್ಟ್ ಗೇಟ್ ಚೈನ್ ತುಂಡಾಗಿ ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ಅಲ್ಲದೇ ಬೆಂಗಳೂರು ಸೇರಿ ನಾನಾ ಭಾಗದಲ್ಲಿ ಮಳೆ ಮುಂದುವರಿದಿದೆ. ಈ ಎಲ್ಲ ವಿಚಾರದ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಹಾಗೇ ಮಳೆ ಹಾನಿ,ಪ್ರವಾಹ ಪರಿಹಾರ ಕಾರ್ಯ ವಿಳಂಬ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು…
ಒಟ್ನಲ್ಲಿ ಸಿಎಂ ಸರಣಿ ಸಭೆ ಮಾಡಿ ಆಡಳಿತಕ್ಕೆ ವರಮಹಾಲಕ್ಷ್ಮೀ ದಿನವೂ ಚುರುಕು ಮುಟ್ಟಿಸಿದ್ದಾರೆ. ಆರ್ಥಿಕ ಇಲಾಖೆ ಸಭೆಯಲ್ಲಿ ಇಂದು ಗ್ಯಾರಂಟಿ ಪರಿಷ್ಕರಣೆ ಸಂಬಂಧ ಚರ್ಚೆಯಾಗಬಹುದು ಎಂಬ ಚರ್ಚೆಯಾಗಿತ್ತು. ಆದ್ರೆ ಇಂದು ಗ್ಯಾರಂಟಿ ಬಗ್ಗೆ ಚರ್ಚೆಯಾಗಿಲ್ಲ. ಮುಂದೆ ಮತ್ತೊಂದು ಸಭೆ ಕರೆಯುವ ಸಾಧ್ಯತೆಯಿದ್ದು,ಎನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ..