ಕಳೆದ ನಾಲ್ಕು ಪಂದ್ಯದಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು RCB ಜೀವಂತವಾಗಿರಿಸಿಕೊಂಡಿದೆ. ಇದೀಗ ಆರ್ಸಿಬಿ ಭರ್ಜರಿ ಕಮ್ಬ್ಯಾಕ್ಗೆ ಬಳಸಿದ ಮಂತ್ರವನ್ನು ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣ: ಸೈಬರ್ ಕ್ರೈಂಗೆ ದೂರು ನೀಡಿದ ನಟಿ ಜ್ಯೋತಿ ರೈ
ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಟೂರ್ನಿಯ ಮೊದಲಾರ್ಧದಲ್ಲಿ ಆಡಿದ್ದ 7 ಪಂದ್ಯಗಳಲ್ಲಿ ಆರ್ಸಿಬಿ ಗೆಲ್ಲಲು ಸಾಧ್ಯವಾಗಿದ್ದು ಒಂದು ಪಂದ್ಯ ಮಾತ್ರ. ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದ್ದ ಆರ್ಸಿಬಿ ಇದೀಗ ಕಳೆದ 5 ಪಂದ್ಯಗಳಲ್ಲಿ ಸತತ 4 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ಸ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಅದರಲ್ಲೂ ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಗುರುವಾರ (ಮೇ 9) ನಡೆದ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನ ನಿಡಿದ ಆರ್ಸಿಬಿ ಅಪಾಯಕಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಬರೋಬ್ಬರಿ 60 ರನ್ಗಳಿಂದ ಮಣಿಸಿ ತನ್ನ ನೆಟ್ ರನ್ರೇಟ್ ಕೂಡ ಸುಧಾರಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 241/7 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇನಿಂಗ್ಸ್ ಬ್ರೇಕ್ ವೇಳೆ ಮಾತನಾಡಿದ ಆರ್ಸಿಬಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಯಶಸ್ಸಿನ ಹಾದಿ ತುಳಿಯಲು ಆರ್ಸಿಬಿ ಅನುಸರಿಸುತ್ತಿರುವ ಮಂತ್ರ ಯಾವುದೆಂದು ವಿವರಿಸಿದ್ದಾರೆ. ಕೆಲ ದಿನಗಳಿಂದ ನಮ್ಮಲ್ಲಿ ಇದೇ ಭಾವನೆ ಆವರಿಸಿದೆ. ಎಲ್ಲ ಪಂದ್ಯಗಳನ್ನು ನಾವು ಗೆಲ್ಲಲೇ ಬೇಕೆಂಬ ಮನಸ್ಥಿತಿಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಈವರೆಗೆ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇನ್ನು ಸಾಗಬೇಕಾದ ಹಾದಿ ದೊಡ್ಡದಿದೆ. ಆದರೆ ನಮ್ಮಲ್ಲಿನ ಈ ಮನೋಭಾವಕ್ಕೆ ಈಗ ಒಗ್ಗಿಕೊಂಡಿದ್ದೇವೆ. ನಮ್ಮ ಯಶಸ್ಸಿಗೆ ಕಾರಣವಾಗಿರುವ ಅಂಶವನ್ನು ಮತ್ತೆ ಮತ್ತೆ ತರಬೇಕು ಎಂಬುದರ ಕಡೆಗೆ ಗಮನ ನೀಡಿದ್ದೇವೆ. ನಮ್ಮ ಬೌಲರ್ಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇನ್ನು ನಮ್ಮ ಬ್ಯಾಟರ್ಗಳು ಎದುರಾಳಿ ಬೌಲರ್ಗಳ ಮೇಲೆ ಒತ್ತಡ ಹಿಡಿದಿಡುತ್ತಿದ್ದಾರೆ. ಇದನ್ನೇ ಮರಳಿ ಮರಳಿ ಮಾಡುತ್ತಾ ಯಶಸ್ಸು ಗಳಿಸುತ್ತಿರುವುದು ತಂಡದ ಯಶಸ್ಸಿನ ಹಿಂದಿರುವ ಮಂತ್ರ ಆಗಿದೆ,” ಎಂದು ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.
ಸತತ ಆರು ಪಂದ್ಯಗಳನ್ನು ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಸತತ 4 ಪಂದ್ಯಗಳಲ್ಲಿ ಜಯ ದಾಖಲಿಸಿ ಎದುರಾಳಿಗಳ ಮನದಲ್ಲಿ ಭಯ ಹುಟ್ಟುವಂತೆ ಮಾಡಿದೆ. ಆರ್ಸಿಬಿ ತನ್ನ ಮುಂದಿನ 2 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಮೇ 12) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಮೇ 18) ಎದುರು ಪೈಪೋಟಿ ನಡೆಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರಷ್ಟೇ ಪ್ಲೇ-ಆಫ್ಸ್ ಪ್ರವೇಶ ಸಾಧ್ಯವಾಗುತ್ತದೆ. ಉಳಿದ ತಂಡಗಳ ಫಲಿತಾಂಶ ಕೂಡ ಆರ್ಸಿಬಿ ತಂಡದ ಭವಿಷ್ಯ ನಿರ್ಧಾರ ಮಾಡಲಿದೆ.