ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ವರ್ತೂರಿನ ಹಲಸನಹಳ್ಳಿ ರಸ್ತೆಯಿಂದ ಡೀನ್ಸ್ ಮತ್ತು ಫೌಂಡೇಶನ್ ಶಾಲೆಗೆ ತೆರಳುವ ರಸ್ತೆಯು ಹಳ್ಳಗಳಾಂತಾಗಿದ್ದು, ರಸ್ತೆಗಳನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಬಳಗದ ಪದಾಧಿಕಾರಿಗಳು ಹಾಗೂ ನೂರಾರು ಸ್ಥಳೀಯರು ಪ್ರತಿಭಟಿಸಿದರು.
ಇಲ್ಲಿನ ರಸ್ತೆಯನ್ನು ಡಾಂಬರೀಕರಣ ಮಾಡುವ ಮೊದಲು ರಸ್ತೆಯನ್ನು ಆಗಲೀಕರಣಗೊಳಿಸಿ ಚರಂಡಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ, ಸ್ಥಳೀಯರು ಮಾತು ಲೆಕ್ಕಿಸದೇ ಅಧಿಕಾರಿಗಳು ಡಾಂಬರೀಕರಣಗೊಳಿಸಿದ್ದರು..
KPTCL Jobs 2024: SSLC ಪಾಸಾದವರಿಗೆ ಕರ್ನಾಟಕ ವಿದ್ಯುತ್ ನಿಗಮದಲ್ಲಿದೆ ಭರ್ಜರಿ ಉದ್ಯೋಗಾವಕಾಶ! ಇಂದೇ ಅರ್ಜಿ ಸಲ್ಲಿಸಿ
ಇದೀಗ ರಸ್ತೆಯು ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ದುರಸ್ಥಿಗೊಳಿಸುವಂತೆ ಆಗ್ರಹಿಸಿದ್ದಾರೆ.. ವಾಹನ ಸವಾರರು, ಶಾಲೆಗೆ ತೆರಳುವ ಮಕ್ಕಳು ದಿನನಿತ್ಯದ ತೊಂದ್ರೆಗೆ ಒಳಗಾಗುತ್ತಿದ್ದು, ಅನಾಹುತಗಳು ಸಂಭವಿಸಿದ್ರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.