ಉತ್ತರಾಖಂಡ: ಉತ್ತರಾಖಂಡದ ಹಾಲಧ್ವಾನಿಯಲ್ಲಿ ಅಕ್ರಮ ಎಂದು ಹೇಳಲಾಗಿರುವ ಮದರಸಾ ನೆಲಸಮ ಮಾಡುವ ವೇೆಳೆ ನಡೆದ ಭಾರೀ ಹಿಂಸಾಚಾರವಾಗಿದೆ. ದಂಗೆಕೋರರ ದಾಳಿಗೆ 50ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿದ್ದು 100ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿವೆ. ಬಾನ್ಭುಲ್ ಪುರ ಪ್ರದೇಶದಲ್ಲಿ ಉದ್ರಿಕ್ತ ಜನರಿಂದ ಕಲ್ಲು ತೂರಾಟ, ಹಿಂಸಾಚಾರ ನಡೆದಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಕಂಡಲ್ಲಿ ಗಂಡು ಹೊಡೆಯುವ ಆದೇಶ ಹೊರಡಿಸಲಾಗಿದೆ. ಜೊತೆಗೆ ನಗರದಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿದೆ.
ಇನ್ನೂ ಗಲಭೆ ಕುರಿತು ಸುದ್ದಿಗೋಷ್ಠಿ ನಡೆಸಿ ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್ ಮಾಹಿತಿ ನೀಡಿದ್ದಾರೆ. ಪೊಲೀಸರನ್ನು ಜೀವಂತ ಸುಡಲು ಪ್ಲಾನ್ ಮಾಡಲಾಗಿತ್ತು. ಮುಸ್ಲಿಮರು ತಮ್ಮ ಮನೆಯ ಮೇಲೆ, ಕಟ್ಟಡದ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಶೇಖರಿಸಿಟ್ಟಿದ್ದರು ಎಂದು ಹೇಳಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
Bharat Ratna Award: PV ನರಸಿಂಹ ರಾವ್, ಚೌಧರಿ ಚರಣ್ ಸಿಂಗ್, MS ಸ್ವಾಮಿನಾಥನ್ʼಗೆ ಭಾರತ ರತ್ನ ಗೌರವ
ಈ ಪೈಕಿ ಅಕ್ರಮವಾಗಿ ಕಟ್ಟಿರುವ ಮದರಸಾವನ್ನು ತೆರವು ಮಾಡಲು ಅದಿಕಾರಿಗಳು ಪೊಲೀಸರ ಜೊತೆ ಆಗಮಿಸಿದ್ದಾರೆ. ಆದರೆ ಹಲವು ದಿನಗಳ ಮೊದಲೇ ಅಕ್ರಮ ಕಟ್ಟಡಳಿಗೆ ನೋಟಿಸ್ ನೀಡಲಾಗಿದೆ. ಏಕಾಏಕಿ ಕಾರ್ಯಾಚರಣೆ ನಡೆಸಿಲ್ಲ. ನೋಟಿಸ್ ಪಡೆದ ಮದರಸಾ ಹಾಗೂ ಮುಸ್ಲಿಮರು ಕಾರ್ಯಾಚರಣೆ ವಿರುದ್ಧ ದಾಳಿ ನಡೆಸಲು ಸಜ್ಜಾಗಿದ್ದರು ಎಂದು ವಂದನಾ ಸಿಂಗ್ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಉತ್ತರಾಖಂಡಕ್ಕೆ 4 ಹೆಚ್ಚುವರಿ ಸಶಸ್ತ್ರ ಕಂಪನಿಗಳನ್ನು ಕಳುಹಿಸಿಕೊಟ್ಟಿದೆ. ಈಗ ಲಭಿಸಿರುವ ಮಾಹಿತಿ ಪ್ರಕಾರ ಅನೇಕ ಪೊಲೀಸರು ಮತ್ತು ಆಢಳಿತಾಧಿಕಾರಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದ್ದು, ಈ ದುಷ್ಕೃತ್ಯದ ಹಿಂದೆ ಇರುವವರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಅಭಿನವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.