ಹೊಸ ಚಪ್ಪಲಿಗಳನ್ನು ಧರಿಸಿದಾಗ ಅದು ಕಾಲುಗಳನ್ನು ಕಚ್ಚಿ ಗಾಯ ಅಥವಾ ಗುಳ್ಳೆಗಳು ಮೂಡುವಂತೆ ಮಾಡುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಹಾಗಾಗಿ ಈ ಗಾಯ ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ.
ಇದರಿಂದ ಗಾಯ ಬಹಳ ಬೇಗನೆ ವಾಸಿಯಾಗುತ್ತದೆ. ಹಾಗೇ ಕರ್ಪೂರವನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಗಾಯ ಮತ್ತಷ್ಟು ಬೇಗನೆ ಗುಣವಾಗುತ್ತದೆ ಮತ್ತು ತುರಿಕೆ ಕಡಿಮೆಯಾಗುತ್ತದೆಯಂತೆ.
ಹಾಗೇ ಗಾಯಗಳ ಮೇಲೆ ಜೇನುತುಪ್ಪವನ್ನು ಹಚ್ಚಿ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಗಾಯಕ್ಕೆ ಸೋಂಕು ತಗುಲದಂತೆ ತಡೆಯುತ್ತದೆ. ಇದರಿಂದ ಗಾಯ ಬೇಗ ವಾಸಿಯಾಗುತ್ತದೆ.
ಹಾಗೇ ಅರಿಶಿನವು ಗಾಯವನ್ನು ತ್ವರಿತವಾಗಿ ಗುಣಪಡಿಸುತ್ತದೆ. ಯಾಕೆಂದರೆ ಇದರಲ್ಲಿ ಆಯಂಟಿ ಸೆಪ್ಟಿಕ್ ಗುಣಗಳಿವೆ. ಇದರಿಂದ ಗಾಯದ ಊತ, ಉರಿ ಕಡಿಮೆಯಾಗಿ ಬೇಗನೆ ವಾಸಿಯಾಗುತ್ತದೆಯಂತೆ.