ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ರಾಸಲೀಲೆಯ ವಿಡಿಯೋಗಳು ತಿಂಗಳುಗಳ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕೈ ಸೇರಿದ್ದವೆಂಬ ಆರೋಪಗಳು ರಾಜ್ಯ ರಾಜಕಾರಣಗಳಲ್ಲಿ ಕೇಳಿಬಂದಿದ್ದವು. ಆದರೆ, ಅವುಗಳನ್ನು ಡಿಕೆಶಿ ನಿರಾಕರಿಸಿದ್ದರು. ಅತ್ತ, ವಿಡಿಯೋಗಳನ್ನು ಹಂಚಿದ ಆರೋಪಕ್ಕೊಳಗಾಗಿರುವ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಕೂಡ ತಾವು ಡಿಕೆಶಿಯವರಿಗೆ ವಿಡಿಯೋಗಳನ್ನು ಕೊಟ್ಟಿಲ್ಲ ಎಂದು ಹೇಳಿದ್ದರು. ಆದರೆ, ಈ ವಿಚಾರದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ.
https://ainlivenews.com/job-opportunity-in-karnataka-examination-authority-for-pu-passers/
![Demo](https://ainlivenews.com/wp-content/uploads/2023/12/spoorthi-1.jpg)
ಇದೇ ವರ್ಷ ಜನವರಿ ತಿಂಗಳಲ್ಲೇ ಪ್ರಜ್ವಲ್ ರೇವಣ್ಣನವರ ತಮ್ಮ ಸೂರಜ್ ರೇವಣ್ಣ ಅವರು, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ, ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು, ಫೋಟೋಗಳನ್ನು ಪ್ರಸಾರ ಮಾಡಬಾರದು ಎಂದು ಮನವಿ ಮಾಡಿದ್ದರೆಂದು ಹೇಳಲಾಗಿದೆ. ಇದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಎಚ್ ಡಿ ಕುಮಾರಸ್ವಾಮಿಯೂ ಆರೋಪಿಸಿದ್ದರು!
ಏ. 30ರಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಹಾಸನದಲ್ಲಿ ಹಾದಿ ಬೀದಿಗಳಲ್ಲಿ ಪ್ರಜ್ವಲ್ ವಿಡಿಯೋಗಳನ್ನು ಪೆನ್ ಡ್ರೈವ್ ಗಳಲ್ಲಿ ತುಂಬಿ ಹಂಚಿದ್ದರ ಹಿಂದೆ ಕಾಂಗ್ರೆಸ್ಸಿನ ಆ ಮಹಾನಾಯಕ ಇದ್ದಾರೆ. ಡಿಸಿಎಂ ಆಗಿರುವ ಆ ಮಹಾನಾಯಕನೇ ಈ ಎಲ್ಲಾ ಪೆನ್ ಡ್ರೈವ್ ಗಳಿಗೆ ಖರ್ಚು ಮಾಡಿಸಿ ಅದನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಅದಕ್ಕೂ ಮೊದಲೇ ಅವರು, ಏ. 29ರಂದು ಸುದ್ದಿಗಾರರೊಂದಿಗೆ ಮಾತನಾಡುವಾಗ, ನಮ್ಮ ರಾಜ್ಯದಲ್ಲಿ ಪೆನ್ ಡ್ರೈವ್ ಎಕ್ಸ್ ಪರ್ಟ್ ಗಳಿದ್ದಾರೆ. ಅವರಿಂದಲೇ ಈ ಹಗರಣ ಬಯಲಿಗೆ ಬಂದಿದೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಡಿಕೆಶಿಯವರ ಹೆಸರು ಎತ್ತದೇ ಇದ್ದರೂ ‘ಡಿಸಿಎಂ’ ಎಂದು ಹೇಳುವ ಮೂಲಕ ನೇರವಾಗಿಯೇ ಆರೋಪ ಮಾಡಿದ್ದರು.
ಆರೋಪ ನಿರಾಕರಿಸಿರುವ ಡಿಕೆಶಿ
ತಮ್ಮ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಮಾಡಿದ್ದ ಆರೋಪಗಳನ್ನು ತಿರಸ್ಕರಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಅಲ್ಲದೆ, ದಿನಕ್ಕೊಮ್ಮೆಯಾದರೂ ನನ್ನ ಹೆಸರು ಬಳಸದೇ ಇದ್ದರೆ ಕುಮಾರಸ್ವಾಮಿಯವರಿಗೆ ದಿನ ಕಳೆಯುವುದೇ ಇಲ್ಲ ಎಂದು ಟಾಂಗ್ ನೀಡಿದ್ದರು. ಆದರೆ, ಅದರ ಬೆನಲ್ಲೇ ಜ. 27ರಂದು ಸೂರಜ್ ರೇವಣ್ಣ ಹಾಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು ಹಾಗೂ ವಿಡಿಯೋಗಳನ್ನು ರಾಜಕೀಯವಾಗಿ ಬಳಸಿಕೊಳ್ಳದಂತೆ ಮನವಿ ಮಾಡಿದ್ದರು ಎಂದು ಹೇಳಿರುವುದು ಪುನಃ ಈ ವಿಚಾರವನ್ನು ಕೆದಕುವಂತೆ ಮಾಡಿದೆ.
ಸೂರಜ್, ಡಿಕೆಶಿ ಭೇಟಿಯಾಗಿದ್ದು ನಿಜವಾ?
ಅಸಲಿಗೆ, ಸೂರಜ್ ರೇವಣ್ಣ ಹಾಗೂ ಡಿಕೆಶಿಯವರು ಪರಸ್ಪರ ಭೇಟಿಯಾಗಿದ್ದು ನಿಜವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಇದೇ ವರ್ಷ ಜನವರಿ 27ರಂದು ಸೂರಜ್ ಅವರು ಡಿಕೆಶಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಕೆಲವು ಸಮಯ ಅವರೊಂದಿಗೆ ಮಾತುಕತೆ ನಡೆಸಿದ್ದರು. ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸೂರಜ್ ರೇವಣ್ಣ, “ಇದೊಂದು ಔಪಚಾರಿಕ ಭೇಟಿಯಷ್ಟೇ. ಈ ಭೇಟಿಯ ವೇಳೆ ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ’’ ಎಂದು ಹೇಳಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)